ADVERTISEMENT

ಕಲಾವಿದರ ಆಯ್ಕೆಗೆ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 15:49 IST
Last Updated 10 ಡಿಸೆಂಬರ್ 2019, 15:49 IST
ಆನೆಗೊಂದಿ ಉತ್ಸವದ ಲೋಗೋ
ಆನೆಗೊಂದಿ ಉತ್ಸವದ ಲೋಗೋ   

ಕೊಪ್ಪಳ: ಆನೆಗೊಂದಿ ಉತ್ಸವ ಆಚರಣೆ ಕಾರ್ಯಕ್ರಮದಲ್ಲಿ ನಡೆಯಲಿರುವ ವಿವಿಧ ಕಲಾ ಪ್ರಕಾರಗಳಲ್ಲಿ ಅರ್ಜಿ ಸಲ್ಲಿಸಿರುವ ಕಲಾವಿದರಿಗೆ ಸಂದರ್ಶನವನ್ನು ಡಿ.11 ರಿಂದ 14 ರವರೆಗೆ ಬೆಳಿಗ್ಗೆ 11 ಗಂಟೆಗೆ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

11 ರಂದು ಸುಗಮ ಸಂಗೀತಾ ಹಾಗೂ ವಚನ ಸಂಗೀತ, ಡಿ.12 ರಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ವಾದ್ಯ ಸಂಗೀತ, 13 ರಂದು ಜಾನಪದ ಸಂಗೀತ ಮತ್ತು 14 ರಂದು ಸಮೂಹ, ಜಾನಪದ, ಶಾಸ್ತ್ರೀಯ ನೃತ್ಯ. ಸಾಮಾಜಿಕ, ಐತಿಹಾಸಿಕ ನಾಟಕ ಹಾಗೂ ತೊಗಲುಗೊಂಬೆಯಾಟ ಕಲಾ ತಂಡಗಳಿಗೆ ಪ್ರತಿ ದಿನ ಬೆಳಿಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.

ಅರ್ಜಿ ಸಲ್ಲಿಸಿರುವ ಕಲಾವಿದರು ತಮ್ಮ ಸಹವಾದ್ಯಗಾರರೊಂದಿಗೆ ವಾದ್ಯಗಳ ಸಮೇತ ಸ್ವ-ಇಚ್ಛೆಯಿಂದ ಭಾಗವಹಿಸಬೇಕು ಎಂದು ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ.ರಂಗಣ್ಣನವರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.