ADVERTISEMENT

ವೈದ್ಯರ ಕರ್ತವ್ಯದ ಮಹತ್ವ ತಿಳಿಯಿತು

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:15 IST
Last Updated 5 ಜೂನ್ 2020, 20:15 IST
 ಡಾ.ವಿನಾಯಕ ಪಟ್ಟಣಶೆಟ್ಟಿ
 ಡಾ.ವಿನಾಯಕ ಪಟ್ಟಣಶೆಟ್ಟಿ   

ಹನುಮಸಾಗರ: ಕೊರೊನಾದಿಂದ ಎಷ್ಟೆಲ್ಲ ನೋವು ಅನುಭವಿಸಿದೆವು ಎಂಬುದಕ್ಕಿಂತ ಕೊರೊನಾದಿಂದ ವೈದ್ಯರ ಕರ್ತವ್ಯದ ಮಹತ್ವ ಎಷ್ಟಿದೆ ಎಂಬುದು ಪೂರ್ಣ ಅರ್ಥವಾಯಿತು.

ನಾನು ಮದುವೆಯಾಗಿ ಈಗ ಐದು ತಿಂಗಳಾಗಿದೆ ಅಷ್ಟೆ. ಕೆಲ ದಿನ ರಜೆ ಹಾಕು ಎಂದು ಮನೆಯಲ್ಲಿ ಒತ್ತಾಯಿಸಿದ್ದರು. ಏನೇ ಆಗಲಿ ನೋಡೋಣ ಎಂದು ಬಂದಿದ್ದೆ. ಬರೋಬ್ಬರಿ ಮೂರು ತಿಂಗಳಾಯಿತು ಮನೆಗೆ ಹೋಗಿಲ್ಲ. ಕುಟುಂಬದವರ ದರ್ಶನ ಮಾಡಿಲ್ಲ. ಏನಿದ್ದರೂ ಫೋನ್ ಕಾಲ್, ವಿಡಿಯೊ ಕಾಲ್‍ನಲ್ಲಿಯೇ ಭೇಟಿ.

ಇಲ್ಲಿಯವರೆಗೆ 2500ಕ್ಕೂ ಹೆಚ್ಚು ಜನರನ್ನು ಆರೋಗ್ಯ ತಪಾಸಣೆ ಮಾಡಿದ್ದೇವೆ. ಯಾವೂ ಪೊಸಿಟಿವ್ ಬಂದಿಲ್ಲ. ಆರಂಭದಲ್ಲಿ ಜನರಿಗೆ ಕೊರೊನಾ ಭಯ ಬಿಡಿಸುವುದೇ ನಮಗೆ ಸವಾಲು ಆಯಿತು. ರಾತ್ರಿ ಹಗಲು ಎನ್ನದೆ ಬರುವ ಅಧಿಕಾರಿಗಳ, ಸಾರ್ವಜನಿಕರ ಕರೆಗಳನ್ನು ಅಟೆಂಡ್ ಮಾಡಿ ಸುಸ್ತಾಗುತ್ತಿದ್ದೆವು.

ADVERTISEMENT

ರಾತ್ರಿ ಪೂರ್ಣ ಪ್ರಮಾಣದಲ್ಲಿ ಊಟ ಮಾಡಿದರೆ ನಿದ್ರೆ ಬರುತ್ತದೆ ಎಂದು ಕೇವಲ ಹಣ್ಣು, ಹಾಲು ಸೇವಿಸಿ ಇರುತ್ತಿದ್ದೆವು.
ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋಗಿ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿದ ಮರು ಕ್ಷಣದಲ್ಲಿಯೇ ಆಸ್ಪತ್ರೆಗೆ ಬಂದ ಉದಾಹರಣೆಗಳಿವೆ. ಮನೆಗೆ ಹೋಗುವುದೇ ಬೇಡ ಎಂದು ಬಹುತೇಕ ಸಮಯ ಆಸ್ಪತ್ರೆಯಲ್ಲಿಯೇ ಇರುತ್ತಿದ್ದೆವು.

-ಡಾ.ವಿನಾಯಕ ಪಟ್ಟಣಶೆಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ,ಹನುಮಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.