ADVERTISEMENT

ಕುಷ್ಟಗಿ | ರಸ್ತೆ ಅವ್ಯವಸ್ಥೆ: ಸವಾರರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:20 IST
Last Updated 2 ಜೂನ್ 2025, 15:20 IST
ಕುಷ್ಟಗಿ ತಾಲ್ಲೂಕು ಮುದೇನೂರು ಬಳಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿರುವುದು
ಕುಷ್ಟಗಿ ತಾಲ್ಲೂಕು ಮುದೇನೂರು ಬಳಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿರುವುದು   

ಕುಷ್ಟಗಿ: ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಕುಷ್ಟಗಿ ತಾಲ್ಲೂಕಿನ ರಸ್ತೆಗಳ ಸ್ಥಿತಿ ಉತ್ತಮವಾಗಿಯೇ ಇದೆ. ಗುಂಡಿ ಬಿದ್ದು ಸಂಚಾರಕ್ಕೆ ಎರವಾಗಿರುವ ರಸ್ತೆಗಳು ಬೆರಳೆಣಿಕೆಯಲ್ಲಿ ಕಂಡುಬರುತ್ತವೆ. ಆದರೆ ಗುಣಮಟ್ಟದ ಕೊರತೆಯೇ ಇಲ್ಲಿಯ ಪ್ರಮುಖ ಸಮಸ್ಯೆ.

ಮೂಲ ಗುತ್ತಿಗೆದಾರರ ಬದಲು ಬೇನಾಮಿ, ಉಪ ಗುತ್ತಿಗೆದಾರರ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಕಾಮಗಾರಿ ಕಳಪೆಯಾಗಿವೆ ಎಂಬ ಅಸಮಾಧಾನ ಇಲ್ಲಿಯ ಜನರದ್ದು.

ದೋಟಿಹಾಳ ಬಳಿಯ ರಾಜ್ಯ ಹೆದ್ದಾರಿ, ಮುದೇನೂರು ರಸ್ತೆಯಲ್ಲಿ ಗುಂಡಿಗಳು ನಿರ್ಮಾಣಗೊಂಡು ಮಳೆಗಾಲದಲ್ಲಿ ನೀರಿನಿಂದ ಆವೃತವಾಗಿ ವಾಹನ ಸವಾರರು ಪರದಾಡುವುದು ಸಾಮಾನ್ಯವಾಗಿದೆ. ಪಟ್ಟಣದ ಸಂದೀಪ್‌ ನಗರದ ಬಳಿ ನಿರ್ಮಾಣಗೊಂಡಿರುವ ರಸ್ತೆ ವರ್ಷದೊಳಗೇ ಹಾಳಾಗಿ ಜನ ತೊಂದರೆ ಅನುಭವಿಸುವಂತಾಗಿದೆ.

ADVERTISEMENT

ನಂದಾಪುರ ಹಾಗಲದಾಳದ ಮಧ್ಯದ ಸಂಪರ್ಕ ರಸ್ತೆಯ ಸಂಪೂರ್ಣ ಕಿತ್ತುಹೋಗಿದ್ದು ವಾಹನಗಳ ಅದರಲ್ಲೂ ಬೈಕ್‌ ಸವಾರರು ಫಜೀತಿಗೀಡಾಗುವಂತಾಗಿದೆ. ಕುಷ್ಟಗಿ ಟೆಂಗುಂಟಿ ಮಧ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ, ಕುಷ್ಟಗಿ ವಜ್ರಬಂಡಿ ರಸ್ತೆಗಳ ಸ್ಥಿತಿಯೂ ಅದೇ ಆಗಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬ ಕೊರಗು ಅಲ್ಲಿಯ ಜನರದು. ರಸ್ತೆ ಅವ್ಯವಸ್ಥೆಯನ್ನು ‘ಪ್ರಜಾವಾಣಿ’ ಕುಷ್ಟಗಿ ವರದಿಗಾರ ನಾರಾಯಣರಾವ ಕುಲಕರ್ಣಿ ಹಾಗೂ ತಾವರಗೇರಾ ವರದಿಗಾರ ಕೆ. ಶರಣಬಸವ ನವಲಹಳ್ಳಿ ಛಾಯಾಚಿತ್ರಗಳಲ್ಲಿ ಸೆರೆ ಹಿಡಿದಿದ್ದಾರೆ.

ನಂದಾಪುರ ಹಾಗಲದಾಳ ಮಧ್ಯೆ ಇರುವ ಸಂಪರ್ಕ ರಸ್ತೆಯಲ್ಲಿ ಕಲ್ಲುಗುಂಡಿಗಳು ಕಂಡುಬರುತ್ತಿವೆ
ಕುಷ್ಟಗಿ ಟೆಂಗುಂಟಿ ಮಧ್ಯದ ರಾಜ್ಯ ಹೆದ್ದಾರಿಯಲ್ಲಿ ಕಾಣುವ ಗುಂಡಿಗಳು
ಮ್ಯಾಗಳಡೊಕ್ಕಿ ಬಳಿ ರಸ್ತೆ ಸೇತುವೆ ಕುಸಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.