ADVERTISEMENT

ಕೃಷಿ ಅಧಿಕಾರಿ ಬಳಿ ಶೇ 113ರಷ್ಟು ಹೆಚ್ಚಿನ ಆಸ್ತಿ ಪತ್ತೆ

ಲೋಕಾಯುಕ್ತ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 16:08 IST
Last Updated 28 ಮಾರ್ಚ್ 2024, 16:08 IST
ಸಹದೇವ ಯರಗೊಪ್ಪ
ಸಹದೇವ ಯರಗೊಪ್ಪ   

ಕೊಪ್ಪಳ/ಗದಗ: ಕೊಪ್ಪಳದ ಕೃಷಿ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಸಹದೇವ ಯರಗೊಪ್ಪ ಅವರ ಮನೆ ಸೇರಿದಂತೆ ಏಕಕಾಲಕ್ಕೆ 10 ಸ್ಥಳಗಳಲ್ಲಿ ಗುರುವಾರ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು ಭಾರಿ ಪ್ರಮಾಣದ ಆಸ್ತಿ ಮತ್ತು ನಗದು ಪತ್ತೆ ಹಚ್ಚಿದ್ದಾರೆ.

ಎರಡು ವರ್ಷಗಳಿಂದ ಕೊಪ್ಪಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹದೇವ ಅವರ ಬಿ.ಟಿ. ಪಾಟೀಲ್ ನಗರದಲ್ಲಿರುವ ಮನೆ, ಜಿಲ್ಲಾಡಳಿತ ಭವನದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಶೋಧ ನಡೆದಿದೆ. ಗದಗ ನಗರದ ಸಾಯಿ ಬಡಾವಣೆಯಲ್ಲಿರುವ ಮನೆ, ರೋಣ ತಾಲ್ಲೂಕಿನ ಮೆಣಸಗಿಯ ಸ್ವಗೃಹ ಸೇರಿದಂತೆ ವಿವಿಧೆಡೆ ಶೋಧ ನಡೆಸಿ, ದಾಖಲೆ ಪರಿಶೀಲಿಸಿದ್ದಾರೆ.

‘ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ ಸೇರಿದಂತೆ ವಿವಿಧೆಡೆಗಳಲ್ಲಿ ಒಟ್ಟು 17 ನಿವೇಶನಗಳು, 27 ಎಕರೆ ಜಮೀನು, ಮೂರು ವಾಣಿಜ್ಯ ಮಳಿಗೆ, ಗದಗ ಮತ್ತು ಕೊಪ್ಪಳದ ಮನೆಯಲ್ಲಿ ₹7.74 ಲಕ್ಷ ನಗದು, ಬ್ಯಾಂಕ್‌ ಖಾತೆಯಲ್ಲಿ ₹39.33 ಲಕ್ಷ, 872 ಗ್ರಾಂ ಚಿನ್ನ, 3.695 ಕೆ.ಜಿ ಬೆಳ್ಳಿ ಸೇರಿದಂತೆ ಒಟ್ಟು ₹3.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಆದಾಯಕ್ಕಿಂತಲೂ ಶೇ 113ರಷ್ಟು ಹೆಚ್ಚಿನ ಆಸ್ತಿ ಹೊಂದಿರುವುದು ಗೊತ್ತಾಗಿದೆ’ ಎಂದು ಗದಗ ಲೋಕಾಯುಕ್ತ ಎಸ್‌ಪಿ ಸತೀಶ್‌ ಚಿಟಗುಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ದಾಖಲೆಗಳ ಪರಿಶೀಲನೆ ಗುರುವಾರ ರಾತ್ರಿಯ ತನಕವೂ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.