ADVERTISEMENT

ಜನ, ರೈತಪರ ಯೋಜನೆ ಜಾರಿ: ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 15:50 IST
Last Updated 17 ಸೆಪ್ಟೆಂಬರ್ 2020, 15:50 IST
ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ಯುವಕನನ್ನು ವಿಚಾರಿಸುತ್ತಿರುವ ಕಂದಾಯ ಸಚಿವ ಆರ್.ಅಶೋಕ
ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ಯುವಕನನ್ನು ವಿಚಾರಿಸುತ್ತಿರುವ ಕಂದಾಯ ಸಚಿವ ಆರ್.ಅಶೋಕ   

ಕೊಪ್ಪಳ: ಭಾರತವನ್ನು ವಿಶ್ವಕ್ಕೆ ಯೋಗ ಗುರು ಎಂದು ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾದ ವತಿಯಿ‌ಂದ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ಮಂಗಳ ಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಿದ್ದಾರೆ. ಮೋದಿ ಚೀನಾ ಮತ್ತು ಪಾಕಿಸ್ಥಾನ ದೇಶಗಳನ್ನು ಎದುರಿಸಿದ್ದಾರೆ. ಅವರಿಂದಾಗಿ ಪ್ರಸ್ತುತ ಭಾರತದ ಪರವಾಗಿ ಇಡೀ ಜಗತ್ತು ನಿಂತಿದೆ. ಎಲ್ಲ ರಂಗದಲ್ಲೂ ಉತ್ತಮ ಬೆಳವಣಿಗೆ ತಂದಿದ್ದಾರೆ. ರೈತರ ಹಾಗೂ ಬಡವರ ಪರವಾಗಿ ಹಲವಾರು ಕೆಲಸ ಮಾಡಿದ್ದಾರೆ. ದೇಶವನ್ನು ಪ್ರಗತಿಯತ್ತ ತೆಗೆದುಕೊಂಡ ಹೋಗುವ ಶಕ್ತಿ ಪ್ರಧಾನಿ ಮೋದಿ ಹೊಂದಿದ್ದಾರೆ. ಹಾಗಾಗಿ ಮುಂದಿನ ಅವಧಿಯ ಐದು ವರ್ಷವೂ ದೇಶವನ್ನೂ ಮುನ್ನಡೆಸುವ ಶಕ್ತಿ ಅವರಿಗೆ ಸಿಗಲಿ‘ ಎಂದರು.

ADVERTISEMENT

ಮೋದಿ ಜನ್ಮದಿನದ ಅಂಗವಾಗಿ ಜನ್ಮ ಸಪ್ತಾಹವನ್ನು ಆಚರಿಸಲಾಗುತ್ತಿದೆ. ರಕ್ತದಾನ, ಆರೋಗ್ಯ, ಅಸಿದವರಿಗೆ ಅನ್ನ, ಸಸಿ ನೆಡುವುದು ಸೇರಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ತಾಲ್ಲೂಕು, ಗ್ರಾಮಗಳಲ್ಲಿ ಅಭಿಯಾನದ ರೀತಿಯಲ್ಲಿ ಆಯೋಜಿಸಲಾಗಿದೆ ಎಂದರು.

‘ನಾನೂ ಕೂಡಾ ಯುವ ಮೋರ್ಚಾ ಪ್ರಾಡಕ್ಟ್ ಆಗಿದ್ದು, ನಾನೂ ಕೂಡಾ ಜೈಲಲ್ಲಿ ಇದ್ದು, ಯುವ ಮೋರ್ಚಾ ಅಧ್ಯಕ್ಷನಾಗಿ, ಶಾಸಕನಾಗಿ, ಉಪಮುಖ್ಯಮಂತ್ರಿಯಾಗಿ, ಪ್ರಸ್ತುತ ಸಚಿವನಾಗಿದ್ದೇನೆ. ಇದಕ್ಕೆಲ್ಲಾ ಕಾರಣ ಯುವ ಮೋರ್ಚಾ. ಹಾಗಾಗಿ ಯುವ ಮೋರ್ಚಾ ಕಾರ್ಯಕರ್ತರಿಗೆ ಒಳ್ಳೆ ಭವಿಷ್ಯ ಇದೆ‘ ಎಂದರು.

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಬಿಜೆಪಿ ಯುವ ಮುಖಂಡರಾದ ಅಮರೇಶ ಕರಡಿ, ನವೀನ್‌ ಗುಳಗಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.