ADVERTISEMENT

ಹೆಚ್ಚಿದ ಭತ್ತದ ಆವಕ: ಬೆಲೆ ಕುಸಿತ

ಭತ್ತದ ಕಣಜದಲ್ಲಿ ರೈತರ ಆತಂಕ: ಖರೀದಿ ಕೇಂದ್ರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 12:13 IST
Last Updated 3 ಡಿಸೆಂಬರ್ 2019, 12:13 IST
ಗಂಗಾವತಿ ಪಟ್ಟಣದ ಹೊರವಲಯದಲ್ಲಿ ಭತ್ತದ ರಾಶಿ ಮಾಡುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು
ಗಂಗಾವತಿ ಪಟ್ಟಣದ ಹೊರವಲಯದಲ್ಲಿ ಭತ್ತದ ರಾಶಿ ಮಾಡುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು   

ಕೊಪ್ಪಳ: ‘ಭತ್ತದ ಕಣಜ’ ಎಂದೇ ಹೆಸರುವಾಸಿಯಾಗಿರುವ ಗಂಗಾವತಿ, ಕನಕಗಿರಿ, ಕಾರಟಗಿ ತಾಲ್ಲೂಕುಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

‘ಗಂಗಾವತಿ ಅಕ್ಕಿ’ ಎಂದೇ ಪ್ರಸಿದ್ಧವಾದ ಸೋನಾ ಮಸೂರಿ ತಳಿಯ ಭತ್ತವನ್ನು ಜಿಲ್ಲೆಯ 56 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದು, ಮಾರುಕಟ್ಟೆಗೆ ಒಂದು ಲಕ್ಷ ಕ್ವಿಂಟಲ್ ಆವಕವಾಗಿದೆ. ಒಂದು ಕ್ವಿಂಟಲ್ ಭತ್ತಕ್ಕೆ ₹ 1,835 ಬೆಲೆ ಇದೆ. 75 ಕೆಜಿ ತೂಕ ಇರುವ ಭತ್ತದ ಒಂದು ಮೂಟೆ ₹1,375ರಿಂದ ₹1,400ಕ್ಕೆ ಮಾರಾಟವಾಗುತ್ತಿದೆ.

ಒಂದು ಹೆಕ್ಟೇರ್ ಪ್ರದೇಶದಲ್ಲಿ 30ರಿಂದ 35 ಮೂಟೆ ಭತ್ತದ ಇಳುವರಿ ಬರುತ್ತಿದೆ.ಕಟಾವು ಆರಂಭವಾಗಿದ್ದು, ಇನ್ನೂ ಒಂದು ವಾರ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುವ ನಿರೀಕ್ಷೆ ಇದೆ.

ADVERTISEMENT

‘ಈ ಸಾರಿ ಉತ್ತಮ ಫಸಲು ಬರುವುದನ್ನು ಅಂದಾಜಿಸಿರುವ ದಲ್ಲಾಳಿಗಳು, ವ್ಯಾಪಾರಸ್ಥರು ಬೆಲೆ ಕಡಿಮೆಗೊಳಿಸಿದ್ದಾರೆ.ಈ ಭಾಗದಲ್ಲಿ 150ಕ್ಕೂ ಹೆಚ್ಚು ಅಕ್ಕಿ ಮಿಲ್‌ಗಳು ಇದ್ದು, ಅಕ್ಕಿ ತಯಾರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ’ ಎನ್ನುತ್ತಾರೆ ರೈತರು.

ಖರೀದಿ ಕೇಂದ್ರ ಆರಂಭಿಸಿ: ಆರಂಭದಲ್ಲೇ ಬೆಲೆ ಕುಸಿತದಿಂದ ಆತಂಕಗೊಂಡಿರುವ ರೈತರು ಖರೀದಿ ಕೇಂದ್ರ ಆರಂಭಿಸಿ ಕ್ವಿಂಟಲ್‌ಗೆ ಕನಿಷ್ಠ ₹ 3 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು ಒಂದು ಒತ್ತಾಯಿಸುತ್ತಿದ್ದಾರೆ.

'ಖರೀದಿ ಕೇಂದ್ರದ ಬಗ್ಗೆ ಇನ್ನೂ ಯಾವುದೇ ಪ್ರಸ್ತಾವ ಬಂದಿಲ್ಲ. ರೈತರ ಬೇಡಿಕೆ ಆಧರಿಸಿ ಜಿಲ್ಲಾಧಿಕಾರಿ ನಿರ್ಧಾರ ಕೈಗೊಳ್ಳುತ್ತಾರೆ’ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ನಿಂಗಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.