ADVERTISEMENT

ವಿದ್ಯಾರ್ಥಿಗಳೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 14:14 IST
Last Updated 29 ಫೆಬ್ರುವರಿ 2020, 14:14 IST
ಹನುಮಸಾಗರ ಸಮೀಪದ ಚಳಗೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಇನ್‌ಸ್ಪೆಕ್ಟರ್ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು
ಹನುಮಸಾಗರ ಸಮೀಪದ ಚಳಗೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಇನ್‌ಸ್ಪೆಕ್ಟರ್ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು   

ಹನುಮಸಾಗರ: ಸಮೀಪದ ಚಳಿಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಿಪಿಐ ಚಂದ್ರಶೇಖರ ಸಂವಾದ ನಡೆಸಿದರು.

ಪರೀಕ್ಷಾ ಪೂರ್ವ ಸಿದ್ಧತೆ, ಪರೀಕ್ಷಾ ಭಯ ನಿವಾರಣೆ, ಉತ್ತರಿಸುವ ವಿಧಾನ ವಿಷಯದ ಮೇಲೆ ಮಕ್ಕಳೊಂದಿಗೆ ಚರ್ಚಿಸಿ ಮಕ್ಕಳಲ್ಲಿನ ದುಗುಡಗಳನ್ನು ನಿವಾರಿಸಿದರು.

ಶಾಲೆಯ ಮುಖ್ಯಶಿಕ್ಷಕ ರಾಯಪ್ಪ ಹೂಗಾರ, ಎಸ್‌ಡಿಎಂಸಿ ಉಪಾಧ್ಯಕ್ಷ ರುಪ್ಪ ಪಟ್ಟಣಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ನಡವಲಮನಿ, ಮಾರುತಿ, ವಿಶಾಲಾಕ್ಷಮ್ಮ, ಪಾಂಡುರಂಗ ಭಾವಿಕಟ್ಟಿ, ಅರವಿಂದ ಕುಮಾರ ದೇಸಾಯಿ, ಕರಿಮ ಸಾಹೇಬ ಇದ್ದಲಗಿ, ಶಾಕೀರಬಾಬಾ, ಶರಣಪ್ಪ ಪರಸಾಪುರ, ಯಂಕವ್ವ ಹಾಗೂ ಶರೀಫಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.