ADVERTISEMENT

ಯಲಬುರ್ಗಾ: ರೈತರಿಗೆ ಸಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:48 IST
Last Updated 14 ಜುಲೈ 2020, 17:48 IST
ಯಲಬುರ್ಗಾ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರೈತರಿಗೆ ಹಣ್ಣಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು
ಯಲಬುರ್ಗಾ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರೈತರಿಗೆ ಹಣ್ಣಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು   

ಯಲಬುರ್ಗಾ: ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಲಿಂಬೆ ಹಾಗೂ ನೇರಳೆ ಸಸಿಗಳನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು.

ಕೃಷಿ ಅಧಿಕಾರಿ ಗೋಣಿ ಬಸಪ್ಪ ಮಾತನಾಡಿ, ತಮ್ಮ ತಮ್ಮ ಹೊಲಗಳ ಬದುವಿನಲ್ಲಿ ಇವುಗಳನ್ನು ಬೆಳೆಸೇಕು. ಹೊಲಗಳಲ್ಲಿ ಮರಗಳಿದ್ದರೆ ವಿವಿಧ ಅನುಕೂಲಗಳಿವೆ ಎಂದು ಅವರು ಹೇಳಿದರು.

ರೈತರು ಬೇಸಾಯದ ಜತೆಗೆ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು
ಹೇಳಿದರು.

ADVERTISEMENT

ಕೃಷಿ ಇಲಾಖೆ ಸಿಬ್ಬಂದಿ ನಟರಾಜ ಬಿದರಿ, ಬಸವರಾಜ ಕರಿಗೌಡ್ರ, ಈರಪ್ಪ ಕಮ್ಮಾರ, ರೈತರಾದ ಶಿವಪ್ಪ, ಕರಿಬೀರಪ್ಪ ಶರಣಪ್ಪ, ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.