ಗಂಗಾವತಿ: ಇಲ್ಲಿನ ಗಣೇಶ ವೃತ್ತದಲ್ಲಿ ಹಿಂದೂ ಮಹಾಸಭಾದ ವತಿಯಿಂದ ವೀರ ಸಾವರ್ಕರ್ ಜಯಂತಿ ಆಚರಿಸಲಾಯಿತು.
ಸಂಘಟನೆಯ ಸದಸ್ಯ ಶ್ರವಣಕುಮಾರ ರಾಯ್ಕರ್ ಮಾತನಾಡಿ,‘ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು’ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಸಾವರ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಮಂಜುನಾಥ ಕಟ್ಟಿಮನಿ, ವಿಜಯ ಕುಮಾರ, ರಾಜೇಶ ಪಾಟೀಲ್, ಬೀಮೇಶ್, ಮಂಜುನಾಥ ಹಿರೇಮಠ, ಸಿದ್ದು, ರಮೇಶ್ ನಾಯಕ ಹಾಗೂ ಪಂಪಾಪತಿ ಕುಂಬಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.