ADVERTISEMENT

ವಾಹನ ಚಾಲಕನಿಗೆ ವಿಶೇಷ ಬೀಳ್ಕೊಡುಗೆ

ವಾಹನ ಚಲಾಯಿಸಿಕೊಂಡು ಮನೆಗೆ ತಲುಪಿಸಿ ಗೌರವ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 4:00 IST
Last Updated 2 ಸೆಪ್ಟೆಂಬರ್ 2021, 4:00 IST
ವಯೋನಿವೃತ್ತಿ ಹೊಂದಿದ ಕೊಪ್ಪಳ ತಾಲ್ಲೂಕು ಪಂಚಾಯಿತಿ ಕಚೇರಿಯ ವಾಹನ ಚಾಲಕ ಚನ್ನಬಸಪ್ಪ ಅವರನ್ನು ತಾ.ಪಂ ಇಒ ಅವರು ಕಾರಿನಲ್ಲಿ ಮನೆಯವರೆಗೂ ಬಿಟ್ಟು ಬಂದರು
ವಯೋನಿವೃತ್ತಿ ಹೊಂದಿದ ಕೊಪ್ಪಳ ತಾಲ್ಲೂಕು ಪಂಚಾಯಿತಿ ಕಚೇರಿಯ ವಾಹನ ಚಾಲಕ ಚನ್ನಬಸಪ್ಪ ಅವರನ್ನು ತಾ.ಪಂ ಇಒ ಅವರು ಕಾರಿನಲ್ಲಿ ಮನೆಯವರೆಗೂ ಬಿಟ್ಟು ಬಂದರು   

ಕೊಪ್ಪಳ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ವಾಹನ ಚಾಲಕರಾಗಿ ಮೂರು ದಶಕ ಸೇವೆ ಸಲ್ಲಿಸಿದ ಡಿ ದರ್ಜೆ ಸಿಬ್ಬಂದಿ ಚನ್ನಬಸಪ್ಪ ಹಾದಿಮನಿ ಅವರು ನಿವೃತ್ತಿ ಹೊಂದಿದ ಕಾರಣ ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಸನ್ಮಾನಿಸಿ ತಾವೇ ವಾಹನ ಚಲಾಯಿಸಿಕೊಂಡು ಮನೆಗೆ ತಲುಪಿಸಿ ಬರುವುದರ ಮೂಲಕ ಗೌರವ ಸಲ್ಲಿಸಿದರು.

ತಾಲ್ಲೂಕು ಪಂಚಾಯಿತಿಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ,‘ಚನ್ನಬಸಪ್ಪ ಸುಮಾರು ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಸೇವೆ ಶ್ಲಾಘನೀಯ’ ಎಂದರು.

ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ಸಹಾಯಕ ನಿರ್ದೇಶಕಿ (ನರೇಗಾ) ಸೌಮ್ಯ ಕೆ., ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹನಮಂತಪ್ಪ ಎಚ್., ತಾಲ್ಲೂಕು ಯೋಜನಾಧಿಕಾರಿ ಆರ್.ಎಚ್ ನದಾಫ್, ವ್ಯವಸ್ಥಾಪಕ ಸಂಗಮೇಶ ಎನ್.ಪಾಟೀಲ, ವಿವಿಧ ಪಂಚಾಯಿತಿ ಪಿಡಿಒಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.