ADVERTISEMENT

ಡೆಂಗಿ ಶಂಕೆ; ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 8:56 IST
Last Updated 20 ಸೆಪ್ಟೆಂಬರ್ 2021, 8:56 IST

ಕನಕಗಿರಿ: ಇಲ್ಲಿನ ಐದನೇ ವಾರ್ಡ್‌ನ ಪೊಲೀಸ್ ಠಾಣೆ ಪರಿಸರದ ನಿವಾಸಿ ಕಿರಣ ತಾವರಗೇರಾ (19) ಭಾನುವಾರ ಶಂಕಿತ ಡೆಂಗಿ ಜ್ವರದಿಂದ ಮೃತಪಟ್ಟಿದ್ದಾರೆ.

‘15 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕಿರಣ ಅವರಿಗೆ ಗಂಗಾವತಿ, ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ, ಡೆಂಗಿ ಜ್ವರ ಇರುವುದು ದೃಢಪಟ್ಟಿತ್ತು’ ಎಂದು ಕಿರಣ ಅವರ ಸಹೋದರ ಗಂಗಾಧರ ತಾವರಗೇರಾ ತಿಳಿಸಿದರು.

‘ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದ ಕಾರಣ ಧಾರವಾಡದ ಎಸ್‌ಡಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದರು.

ADVERTISEMENT

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರಾಘವೇಂದ್ರ ಮಾತನಾಡಿ,‘ಯುವಕನ ಹೆಸರು ಜಿಲ್ಲಾ ಪ್ರಯೋಗಾಲಯದಲ್ಲಿ ನೋಂದಾಣಿಯಾಗಿಲ್ಲ. ಈ ಕುರಿತು ಪರಿಶೀಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.