ಅಳವಂಡಿ: ‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬೇರೆ ಪ್ರದೇಶಗಳಿಂದ ಬಂದವರ ಮೇಲೆ ನಿಗಾವಹಿಸಬೇಕು. ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗ್ರಾಮವನ್ನು ಕೊರೊನಾ ಮುಕ್ತ ಮಾಡಬೇಕು’ ಎಂದು ನೋಡಲ್ ಅಧಿಕಾರಿ ಸಿಡಿಪಿಒ ರೋಹಿಣಿ ಹೇಳಿದರು.
ಅಳವಂಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಭಾರತಿ ಬೆಣಕಲ್ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪಿಡಿಒ ರುದ್ರಯ್ಯ ಹಿರೇಮಠ ಮಾತನಾಡಿದರು.
ಗ್ರಾ.ಪಂ. ಉಪಾಧ್ಯಕ್ಷೆ ಶಂಕ್ರಮ್ಮ ಜೋಗಿನ್, ಉಪ ತಹಶೀಲ್ದಾರ್ ಶರಣಬಸವೇಶ ಕಳ್ಳಿಮಠ, ಕಾರ್ಯದರ್ಶಿ ಬಸವರಾಜ, ವೈದ್ಯಾಧಿಕಾರಿ ವೀರಣ್ಣ, ಆರೋಗ್ಯ ಸಹಾಯಕ ಅಬ್ಬಾಸ್, ಮುಖಂಡರಾದ ರೇಣುಕಪ್ಪ ಹಳ್ಳಿಕೇರಿ, ಹನುಮಂತ ಮೂಲಿಮನಿ, ಗುರುಬಸವರಾಜ್ ಹಳ್ಳಿಕೇರಿ, ಅನ್ವರ ಗಡಾದ, ಹನುಮಂತ ಮೋರನಾಹ, ಮಂಜುನಾಥ ಬೆದವಟ್ಟಿ, ತೋಟಯ್ಯ ಅರಳೆಮಠ, ಮಲ್ಲಪ್ಪ ಬೆಣಕಲ್, ಗುರು ದಾಸರಡ್ಡಿ, ಗವಿಸಿದ್ದಪ್ಪ ಭಂಜತ್ರಿ , ಪ್ರಕಾಶ, ಸಿಬ್ಬಂದಿ ದೇವೆಂದ್ರ ರಡ್ಡಿ, ಚಂದ್ರಶೇಖರ, ಹನುಮಂತ, ದಾವಲ್ ಸಾಬ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.