ADVERTISEMENT

ಬಾಳೆ ತೋಟಕ್ಕೆ ‌ನುಗ್ಗಿದ ತುಂಗಭದ್ರಾ ನದಿ ನೀರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 5:45 IST
Last Updated 10 ಆಗಸ್ಟ್ 2022, 5:45 IST

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಮಂಗಳವಾರ ಅಪಾರ ಪ್ರಮಾಣದಲ್ಲಿ ‌ನೀರು ಬಿಟ್ಟ ಕಾರಣ ತಾಲ್ಲೂಕಿನ ಆನೆಗೊಂದಿ ಭಾಗದ ಬಾಳೆ ತೋಟಕ್ಕೆ ನೀರು ‌ನುಗ್ಗಿದೆ.

ಕೆಲ ದಿನಗಳ‌ ಹಿಂದೆಯಷ್ಟೇ ನಾಟಿ ಮಾಡಿದ್ದ ಭತ್ತದ ಪೈರು ಕೊಚ್ಚಿಕೊಂಡು ಹೋಗಿದೆ.

ಅಂಜನಾದ್ರಿ, ಹನುಮನಹಳ್ಳಿ ಸಮೀಪದ ಕೆಲ ಬಾಳೆ ತೋಟ ಸಂಪೂರ್ಣ ಜಲಾವೃತವಾಗಿದೆ‌. ಪಂಪಾ ಸರೋವರ, ವಿರೂಪಾಪುರ ಗಡ್ಡೆ ಭಾಗದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು ಇನ್ನಷ್ಟು ಸ್ಮಾರಕಗಳು ಜಲಾವೃತವಾಗುವ ಆತಂಕ ಎದುರಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.