ADVERTISEMENT

ಜನಮನ ಗೆಲ್ಲಲು ಸೇವೆಯೊಂದೇ ಮಾರ್ಗ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 8:50 IST
Last Updated 23 ಅಕ್ಟೋಬರ್ 2017, 8:50 IST

ಭಾರತೀನಗರ: ಜನರ ಮನ ಗೆಲ್ಲಲು ಉತ್ತಮ ಸೇವೆಯೊಂದೇ ಮಾರ್ಗವಾಗಿದೆ ಎಂದು ಸಿಪಿಐ ಶಿವಮಲವಯ್ಯ ಹೇಳಿದರು. ಇಲ್ಲಿನ ವಿಶ್ವಜ್ಞಾನಿ ಅಂಬೇಡ್ಕರ್‌ ಪ್ರಬುದ್ಧ ಸ್ವಾಭಿಮಾನಿ ಬಳಗ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ, ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಅಧಿಕಾರ ಬಂದಾಕ್ಷಣ ಅಹಂಕಾರ ಜೊತೆ ಜೊತೆಗೇ ಬಂದುಬಿಡುತ್ತದೆ. ಅದು ನಮ್ಮ ವ್ಯಕ್ತಿತ್ವ ಹಾಳು ಮಾಡುವುದರ ಜೊತೆಗೆ, ಪ್ರಪಾತಕ್ಕೆ ತಳ್ಳುತ್ತದೆ. ಅಧಿಕಾರ ಸಿಕ್ಕಾಗ ಉತ್ತಮ ಸೇವೆ ಮಾಡಿದರೆ ಮಾನಸಿಕ ನೆಮ್ಮದಿ ಲಭ್ಯವಾಗುವುದರ ಜೊತೆಗೆ ಜನರ ಮನಸ್ಸನ್ನು ಗೆಲ್ಲುವುದಕ್ಕೆ ಸಹಕಾರಿಯಾಗುತ್ತದೆ ಎಂದರು.

ಸಮತಾ ಸೈನಿಕ ದಳ ಜಿಲ್ಲಾ ಘಟಕದ ಅಧ್ಯಕ್ಷ ಕರಡಕೆರೆ ಯೋಗೇಶ್‌ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಜನರ ಮನಸ್ಸಿಗೆ ಹತ್ತಿರವಾಗುವುದು ಅಪರೂಪ. ಪೊಲೀಸ್‌ ಅಧಿಕಾರಿಗಳು ಜನರ ಮನಸ್ಸಿಗೆ ಹಿಡಿಸುವುದು ಇನ್ನು ದುರ್ಲಭ. ಅಂತಹ ಅಪರೂಪದ ಪೊಲೀಸ್‌ ಅಧಿಕಾರಿ ಶಿವಮಲವಯ್ಯ ಅವರ ಸೇವೆ ಮೆಚ್ಚುವಂತಹದ್ದು ಎಂದರು.

ADVERTISEMENT

ಬಳಗದ ಅಧ್ಯಕ್ಷ ಅಮೀನ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಚಿಕ್ಕರಸಿನಕೆರೆ ಎಂ. ಮೂರ್ತಿ, ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಮುಡೀನಹಳ್ಳಿ ತಿಮ್ಮಯ್ಯ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಸಬ್ಬನಹಳ್ಳಿ ಕುಮಾರ, ಕೆ. ಶೆಟ್ಟಹಳ್ಳಿ ಪುಟ್ಟಣ್ಣ, ಕಾಡುಕೊತ್ತನಹಳ್ಳಿ ಬೊಮ್ಮರಾಜು, ಸಬ್ಬನಹಳ್ಳಿ ಸಿದ್ದರಾಜು, ವೆಂಕಟೇಶ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.