ADVERTISEMENT

ನಿಖಿಲ್‌ ಗೆಲ್ತಾರೆ, ಬೆಟ್ಟಿಂಗ್‌ ಕಟ್ಟುವೆ: ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 10 ಮೇ 2019, 15:20 IST
Last Updated 10 ಮೇ 2019, 15:20 IST

ಕೆ.ಆರ್‌.ಪೇಟೆ: ‘ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಈಗಾಗಲೇ ಜಯ ಗಳಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಈ ಬಗ್ಗೆ ಯಾರೇ ಬಂದರೂ ಬೆಟ್ಟಿಂಗ್‌ ಕಟ್ಟುತ್ತೇನೆ’ ಎಂದು ಶಾಸಕ ನಾರಾಯಣಗೌಡ ಶುಕ್ರವಾರ ಸವಾಲು ಹಾಕಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಿಖಿಲ್‌ ಮಂಡ್ಯ ಜಿಲ್ಲೆಗೆ ಸಂಸದರಾಗಿ ಆಗಿದೆ. ಜೆಡಿಎಸ್‌ ಕಾರ್ಯಕರ್ತರು ಸಂಭ್ರಮದಲ್ಲಿ ಇದ್ದಾರೆ. ಇದು ಸಣ್ಣ ಸಂಭ್ರಮವಾಗಿದ್ದು ಮೇ 23ರಂದು ದೊಡ್ಡ ಮಟ್ಟದಲ್ಲಿ ಸಂಭ್ರಮ ಆಚರಣೆ ಮಾಡಲಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT