
ಪ್ರಜಾವಾಣಿ ವಾರ್ತೆಮಳವಳ್ಳಿ: ತಾಲ್ಲೂಕಿನ ಅಗಸನಪುರದಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀ ಬಸವೇಶ್ವರಸ್ವಾಮಿ ಕೊಂಡೋತ್ಸವ ಅದ್ದೂರಿಯಾಗಿ ನೆರವೇರಿತು.
ಸೋಮವಾರ ಸಂಜೆ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕೊಂಡಕ್ಕೆ ಸೌದೆಗಳನ್ನು ತಂದು ಹಾಕಿದರು.
ನಂತರ ದೇವಾಲಯದ ಅರ್ಚಕ ನಾಗರಾಜು ಗ್ರಾಮದ ಹೊರವಲಯದಲ್ಲಿರುವ ಶನಿದೇವರ ದೇವಾಲಯದ ಬಳಿ ಪೂಜೆ ಸಲ್ಲಿಸಿ ಕಳಸವನ್ನು ತಮಟೆ ವಾದ್ಯಗಳೊಡನೆ ಗ್ರಾಮದ ಆರಾಧ್ಯರ ಮನೆಯಲ್ಲಿ ಇರಿಸಲಾಯಿತು.
ಮಂಗಳವಾರ ಮುಂಜಾನೆ ಸಿದ್ಧಪಡಿಸಿದ್ದ ಬೆಂಕಿಯ ಮೇಲೆ ಓಡಿ ಹೋಗುವ ಮೂಲಕ ಕೊಂಡೋತ್ಸವ ನೆರವೇರಿತು. ನಂತರ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಳಿಸಿ ಪೂಜಾಕುಣಿತದೊಡನೆ ಮನೆ-ಮನೆಗೆ ತೆರಳಿ ಪೂಜೆ ಮಾಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.