ಮಳವಳ್ಳಿ: ತಾಲ್ಲೂಕಿನ ಶಿವನಸ ಮುದ್ರಂನ ಬಳಿಯಿರುವ ಮಲಿಕ್ಯಾತನಹಳ್ಳಿಯಲ್ಲಿ ಸ್ನೇಹ ಮಿಲನಮಿತ್ರ ಬಳಗದವತಿಯಿಂದ ಕೃತಕ ಪರಿಸರವನ್ನು ಸೃಷ್ಠಿಸಿ ಒಂದು ಕೈಯಲ್ಲಿ ಗದೆ, ಒಂದು ಕೈಯಲ್ಲಿ ಬೆಟ್ಟವನ್ನು ಹಿಡಿದು ನಿಂತಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ಶುಕ್ರವಾರ ಪೂಜಾ ಕಾರ್ಯಕ್ರಮ ನಡೆಸಿ ವಿಸರ್ಜನೆ ಮಾಡಲಾಯಿತು.
ಗಣೇಶನನ್ನು ಪ್ರತಿಷ್ಠಾಪಿಸಲು ಪ್ಲಾಸ್ಟಿಕ್ ಕವರ್ನಿಂದ ನೀಲಾಕಾಶದಂತೆ ಮಂಟಪ ಮಾಡಿ, ಗಣೇಶನ ಮುಂಭಾಗ ಆನೆ, ಜಿಂಕೆಯ ಪ್ರತಿಮೆಗಳನ್ನು ಇರಿಸಲಾಗಿತ್ತು. ಸುತ್ತಲೂ ಗರಿಕೆ ಹಾಗೂ ಸಣ್ಣ ಸಣ್ಣ ಗಿಡಗಳನ್ನು ಇರಿಸಿ ಹಸಿರುಪರಿಸರದ ನಡುವೆ ಗಣೇಶನನ್ನು ಪ್ರತಿಷ್ಠಾಪಿಸಿದ್ದು ವಿಶೇಷವಾಗಿದ್ದು ಇದೇ ಕಳೆದ 12 ವರ್ಷಗಳಿಂದಲೂ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.