ADVERTISEMENT

94 ಅಡಿಗೆ ಇಳಿದ ಕೆಆರ್‌ಎಸ್ ನೀರಿನ ಮಟ್ಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 10:05 IST
Last Updated 7 ಏಪ್ರಿಲ್ 2012, 10:05 IST
94 ಅಡಿಗೆ ಇಳಿದ ಕೆಆರ್‌ಎಸ್ ನೀರಿನ ಮಟ್ಟ
94 ಅಡಿಗೆ ಇಳಿದ ಕೆಆರ್‌ಎಸ್ ನೀರಿನ ಮಟ್ಟ   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಶುಕ್ರವಾರ (ಏ.6) ಸಂಜೆ ವೇಳೆಗೆ 94 ಅಡಿಗೆ ಇಳಿದಿದೆ.

ಜಲಾಶಯಕ್ಕೆ ಕೇವಲ 501 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ 3298 ಕ್ಯೂಸೆಕ್ ನೀರನ್ನು ಹರಿಯ ಬಿಡಲಾಗಿದೆ. ವಿಶ್ವೇಶ್ವರಯ್ಯ ನಾಲೆಗೆ 2998, ಆರ್‌ಬಿಎಲ್‌ಎಲ್ 250 ಹಾಗೂ ಎಲ್‌ಬಿಎಲ್‌ಎಲ್ ನಾಲೆಯ ಮೂಲಕ 58 ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದೆ. ಜಲಾಶಯದಲ್ಲಿ ಶುಕ್ರವಾರ 10.5 ಟಿಎಂಸಿಯಷ್ಟು ಕೃಷಿಗೆ ಬಳಸಬಹುದಾದ ನೀರು ಲಭ್ಯವಿದೆ. 74 ಅಡಿ (ಡೆಡ್ ಸ್ಟೋರೇಜ್) ಕೆಳಗಿನ ಸುಮಾರು 8 ಟಿಎಂಸಿ ನೀರನ್ನು ಜಲಾಶಯದಲ್ಲೇ ಉಳಿಸಿಕೊಳ್ಳಬೇಕಾದ ಅಗತ್ಯವಿದೆ.

`ಕಟ್ಟು~ ಪದ್ಧತಿಯಲ್ಲಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. 20 ದಿನ ನೀರು ಹರಿಸುವುದು ಮತ್ತು 10 ದಿನ ನೀರು ನಿಲ್ಲಿಸುವುದು ನಡೆಯುತ್ತಿದೆ. ಮೇ.31ರ ವರೆಗೆ ಈ ಪದ್ಧತಿಯಲ್ಲಿ ಕೃಷಿ ಉದ್ದೇಶಕ್ಕೆ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ನದಿಯ ಚಿಕ್ಕ ಅಣೆಗಳ ಮೂಲಕ ದೇವರಾಯ, ವಿರಿಜಾ ಮತ್ತು ಬಂಗಾರದೊಡ್ಡಿ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. ಕಳೆದ ವರ್ಷ (103.52) ಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 9 ಅಡಿಗಳಷ್ಟು ನೀರು ಕಡಿಮೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.