ADVERTISEMENT

ಕರಡಿ ಪ್ರತ್ಯಕ್ಷ: ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 14:18 IST
Last Updated 24 ನವೆಂಬರ್ 2020, 14:18 IST

ಹಲಗೂರು: ಸಮೀಪದ ಬಸವನಬೆಟ್ಟ ಅರಣ್ಯ ಪ್ರದೇಶದಿಂದ ಬಂದ ಎರಡು ಕರಡಿಗಳು ಹಲಗೂರಿನ ಪ್ರಮುಖ ರಸ್ತೆಯಲ್ಲಿ ಓಡಾಡಿರುವ ಘಟನೆ ನಡೆದಿದೆ.

ಹಲಗೂರು ನಿವಾಸಿ ಅಲ್ತಾಫ್ ಪಾಷಾ ರೇಷ್ಮೆ ಗೂಡು ವ್ಯಾಪಾರಕ್ಕಾಗಿ ಬೆಳಗಿನ ಜಾವ ಆರು ಗಂಟೆಯಲ್ಲಿ ಹಲಗೂರಿನ ಪ್ರಮುಖ ವೃತ್ತದಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಪ್ರತ್ಯಕ್ಷಗೊಂಡ ಎರಡು ಕರಡಿಗಳು ಅಲ್ತಾಫ್ ಪಾಷಾ ಅವರಿಗೆ ಹಿಂಬದಿಗೆ ಗುದ್ದಿ ಸಣ್ಣ ಗಾಯ ಮಾಡಿದೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನಾಯಿಗಳ ಬೊಗಳುವಿಕೆಯಿಂದ ಹೆದರಿದ ಕರಡಿಗಳು ತಕ್ಷಣ ಗಾಬರಿಗೊಳಗಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಡೆ ಓಡಿ ಹೋಗಿವೆ.

ಕರಡಿಗಳ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಕರಡಿಗಳು ಪತ್ತೆಯಾಗಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.