ADVERTISEMENT

ಬೆಳಕವಾಡಿ: ಅಕ್ರಮ ಸಾಗಿಸುತ್ತಿದ್ದ ಪಡಿತರ ವಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 11:12 IST
Last Updated 24 ಫೆಬ್ರುವರಿ 2025, 11:12 IST
ಬೆಳಕವಾಡಿ ಸಮೀಪದ ಬಿಳಿಜಗಲಿ ಮೊಳೆ ಗ್ರಾಮದ ಬಳಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆಟೋವನ್ನು ವಶಪಡಿಸಿಕೊಳ್ಳಲಾಯಿತು. ಆಹಾರ ನಿರೀಕ್ಷಕ ಬಿ.ಅಶ್ವತ್ಥ್‌, ಎಎಸ್ಐ ಮರಿಸ್ವಾಮಿ ಪಾಲ್ಗೊಂಡಿದ್ದರು
ಬೆಳಕವಾಡಿ ಸಮೀಪದ ಬಿಳಿಜಗಲಿ ಮೊಳೆ ಗ್ರಾಮದ ಬಳಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆಟೋವನ್ನು ವಶಪಡಿಸಿಕೊಳ್ಳಲಾಯಿತು. ಆಹಾರ ನಿರೀಕ್ಷಕ ಬಿ.ಅಶ್ವತ್ಥ್‌, ಎಎಸ್ಐ ಮರಿಸ್ವಾಮಿ ಪಾಲ್ಗೊಂಡಿದ್ದರು   

ಬೆಳಕವಾಡಿ: ಸಮೀಪದ ಬಿಳಿಜಗಲಿ ಮೊಳೆ ಗ್ರಾಮದ ಶನೇಶ್ವರಸ್ವಾಮಿ ದೇವಸ್ಥಾನದ ಬಳಿ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆಟೋ ಚಾಲಕನನ್ನು ಬೆಳಕವಾಡಿ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಿವಾಸಿ ದಿಲೀಪ್ ಕುಮಾರ್ ಬಂಧಿತ. ತಲಕಾಡು ಕಡೆಯಿಂದ ಬಿಳಿಜಗಲಿ ಮೊಳೆ ಮಾರ್ಗವಾಗಿ ಕಿರುಗಾವಲಿಗೆ ಪ್ಯಾಸೆಂಜರ್ ಆಟೋದಲ್ಲಿ ಸುಮಾರು 40ರಿಂದ 50 ಕೆ.ಜಿ. ತುಂಬಿದ 15 ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಸಾಗಣೆ ಮಾಡುತ್ತಿದ್ದ ವೇಳೆ ತಾಲ್ಲೂಕು ಕಚೇರಿ ಆಹಾರ ನಿರೀಕ್ಷಕ ಬಿ. ಅಶ್ವತ್ಥ್ ಹಾಗೂ ಪೊಲೀಸರು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.