ADVERTISEMENT

ಮಳವಳ್ಳಿ: ಚಿನ್ನದ ಸರ ಕಸಿದು ಪರಾರಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 5:12 IST
Last Updated 18 ಆಗಸ್ಟ್ 2023, 5:12 IST
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ    

ಮಳವಳ್ಳಿ: ತಾಲ್ಲೂಕಿನ ಕಲ್ಲಾರೇಪುರ ಗ್ರಾಮದ ರಸ್ತೆಯಲ್ಲಿ ನಡೆದು ಬರುತ್ತಿದ್ದ ಶಿಕ್ಷಕಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.


ಶಿಕ್ಷಕಿ ಪಟ್ಟಣದ ಇನ್.ಇ.ಎಸ್.ಬಡಾವಣೆಯ ಶಿವಮ್ಮಣಿ ಚಿನ್ನರ ಸರ ಕಳೆದುಕೊಂಡ ಮಹಿಳೆ. ಎಂದಿನಂತೆ ಶಾಲೆ ಮುಗಿಸಿ ಗುರುವಾರ ಸಂಜೆ ಗ್ರಾಮದ ಗೇಟ್ ವರೆಗೆ ನಡೆದುಕೊಂಡು ಬರುತ್ತಿದ್ದ ಆಲದ ಮರದ ಬಳಿ ನಿಂತಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಶಿವಮ್ಮಣಿ ಕತ್ತಿನಲ್ಲಿದ್ದ 30 ಗ್ರಾಂ.ತೂಕದ ಸರವನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ.

ಈ ವೇಳೆ ಎಚ್ಚೆತ್ತುಕೊಂಡ ಶಿಕ್ಷಕಿ ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದು, ಕೂಗಿಕೊಂಡಿದ್ದಾರೆ ಆದರೂ ಕಳ್ಳರು ಅರ್ಧ ದಷ್ಟು (20 ಗ್ರಾಂ) ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಡಿವೈಎಸ್ ಪಿ ಎನ್.ನವೀನ್ ಕುಮಾರ್, ಸಿಪಿಐ ಎಂ.ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.