ADVERTISEMENT

ದರೋಡೆಗೆ ಸಂಚು: ಬಂಧನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 3:18 IST
Last Updated 16 ಜನವರಿ 2021, 3:18 IST

ಶ್ರೀರಂಗಪಟ್ಟಣ: ದರೋಡೆಗೆ ಸಂಚು ರೂಪಿಸಿದ 10 ಮಂದಿ ಆರೋಪಿಗಳನ್ನು ಕೆಆರ್‌ಎಸ್‌ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೆಆರ್‌ಎಸ್‌ ಸಮೀಪ ಇಲ ವಾಲ ರಸ್ತೆಯ ಡಿ’ಪಾಲ್‌ ಶಾಲೆ ಬಳಿ ಮಚ್ಚು, ಲಾಂಗು ಸಹಿತ ದರೋಡೆಗೆ ಸಂಚು ಹಾಕಿದ್ದ ಆರೋಪಿಗಳನ್ನು ಎಸ್‌ಐ ನವೀನ್‌ಗೌಡ ತಂಡ ಬಂಧಿಸಿದೆ.

ತಾಲ್ಲೂಕಿನ ಹುಲಿಕೆರೆಯ ಯಶವಂತ್‌, ಕಿಶೋರ್‌, ಆಕಾಶ್‌, ಸಚಿನ್‌, ಶಿವು, ಚಲುವರಾಜು, ನಂದೀಶ್‌ಗೌಡ, ಕೆಆರ್‌ಎಸ್‌ನ ಶಶಾಂಕ್‌, ಹೊಂಗಹಳ್ಳಿಯ ನಿಶ್ಚಿತ್, ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ಎ.ಪಿ. ಪ್ರಥಮ್‌ ಬಂಧಿತರು.

ADVERTISEMENT

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋ ಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ದರೋಡೆ ಸಂಚು ರೂಪಿಸುತ್ತಿದ್ದ ಸಂಗತಿ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಐ ನವೀನ್‌ಗೌಡ ತಿಳಿಸಿದ್ದಾರೆ.

ಬಂಧಿತರಿಂದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಕೆಆರ್‌ಎಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.