ADVERTISEMENT

ಮಂಡ್ಯ| ಪಕ್ಷ ಕಟ್ಟಿದ ಡಿಕೆಶಿಗೆ ಸಿ.ಎಂ. ಸ್ಥಾನ ಸಿಗಲಿ: ಮಾಜಿ ಸಚಿವ ಬಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:46 IST
Last Updated 13 ಅಕ್ಟೋಬರ್ 2025, 2:46 IST
ಬಿ.ಸೋಮಶೇಖರ್
ಬಿ.ಸೋಮಶೇಖರ್   

ಮಂಡ್ಯ: ‘ರಾಜ್ಯದಲ್ಲಿ ಕಷ್ಟದ ಕಾಲದಲ್ಲಿ ಶ್ರಮಪಟ್ಟು ಕಾಂಗ್ರೆಸ್‌ ಪಕ್ಷ ಕಟ್ಟಿದ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದು ತಪ್ಪಲ್ಲ, ಅವರಿಗೂ ಅವಕಾಶ ಸಿಗಲಿ’ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ‘ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ. ನಾನು ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಬಂದಿಲ್ಲ. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದು ಹಾಗೂ ನನ್ನ ಹಿರಿತನ ಪರಿಗಣಿಸಿ ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇನೆ’ ಎಂದರು.

‘ಸಿಜೆಐ ಬಿ.ಆರ್‌.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದದ್ದು ಆಘಾತಕಾರಿ ವಿಷಯವಾಗಿದೆ. ಇಂತಹ ಕೃತ್ಯದಿಂದ ಆರ್‌ಎಸ್‌ಎಸ್‌ನಿಂದ ತಯಾರಾದ ವ್ಯಕ್ತಿಗಳ ಮನಸ್ಥಿತಿ ಗೋಚರವಾಗುತ್ತಿದೆ. 2024ರ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಆಡಳಿತದಲ್ಲಿ ಆಘಾತಕಾರಿ ಬೆಳವಣಿಗೆ ಕಾಣುತ್ತಿದೆ’ ಎಂದು ವಿಷಾದಿಸಿದರು.

ADVERTISEMENT

‘ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ವೈ.ಪೂರಣ್ ಕುಮಾರ್ ಮೆಲ್ವರ್ಗದವರ ದಬ್ಬಾಳಿಕೆ ಕಾರಣದಿಂದ ಸಾವಿಗೀಡಾಗಿದ್ದಾರೆ. ಮಾನಸಿಕವಾಗಿ ಹಿಂಸೆ ಕೊಟ್ಟು ಸಾಯಿಸಿದ್ದಾರೆ. ನ್ಯಾಯಾಂಗ, ಆಡಳಿತ ವರ್ಗ ನೋಡಿದರೆ ದೇಶದ ಸಂವಿಧಾನ ಬಹಳ ಕಷ್ಟದಲ್ಲಿದೆ‌ ಎನ್ನಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆರ್‌ಎಸ್‌ಎಸ್‌ ಮುಖವಾಡ ನುಸುಳಿಕೊಂಡಿವೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.