ಕೆ.ಆರ್.ಪೇಟೆ: ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರನ್ನು ಗೆಲ್ಲಿಸಿದರೆ, ಈ ತಾಲ್ಲೂಕಿಗೆ ಅಗತ್ಯವಾದ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸ ಲಾಗುತ್ತದೆ ಎಂದುಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಪಟ್ಟಣದಲ್ಲಿ ದುರ್ಗಾಭವನ್ ಸರ್ಕಲ್ನಿಂದ ಶ್ರೀರಂಗ ಚಿತ್ರಮಂದಿರ ದವರೆಗೆ ಡಿ.ವಿ.ಸದಾನಂದಗೌಡ ಅವರು ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಪರ ಪ್ರಚಾರ ನಡೆಸಿದರು.
ಪ್ರವಾಸಿಮಂದಿರ ವೃತ್ತದಲ್ಲಿ ಮಾತನಾಡಿದ ಅವರು, ‘ಕೆ.ಆರ್.ಪೇಟೆ ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿ ಮಾಡಲಾಗುವುದು. ತಾಲ್ಲೂಕಿನ ಜನರು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದರು.
ಈ ಕ್ಷೇತ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನ್ಮಭೂಮಿ ಯಾಗಿದೆ. ಹುಟ್ಟೂರಾದ ಕೆ.ಆರ್.ಪೇಟೆಯಲ್ಲಿ ಕಮಲವನ್ನು ಆರಳಿಸುವ ಆಸೆ ಯಡಿಯೂರಪ್ಪ ಅವರಿಗಿದೆ ಎಂದರು.
ಬಿಜೆಪಿ ಮುಖಂಡರಾದ ಬೂಕಹಳ್ಳಿ ಮಂಜು, ಕೆ.ಶ್ರೀನಿವಾಸ್, ನಾಗಣ್ಣಗೌಡ, ಸಿದ್ದರಾಮಯ್ಯ, ತಮ್ಮೇಶ್ ಗೌಡ, ವಿಜಯಕುಮಾರ್, ಪ್ರಮೀಳಾ, ವರದ ರಾಜೇಗೌಡ, ಬೂಕನಕೆರೆ ಮಧು ಸೂದನ್, ಭರತ್, ಹರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.