ADVERTISEMENT

ವಿದ್ಯುತ್ ಸ್ಪರ್ಶ: ರೈತ ಸಾವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 13:08 IST
Last Updated 21 ಅಕ್ಟೋಬರ್ 2020, 13:08 IST
ಟಿ.ಕೆ.ಅನಂತು
ಟಿ.ಕೆ.ಅನಂತು   

ಪಾಂಡವಪುರ: ತಾಲ್ಲೂಕಿನ ಶಂಕನಹಳ್ಳಿ ಗ್ರಾಮದ ಸಮೀಪ ಬುಧವಾರ ಪರಂಗಿ ತೋಟಕ್ಕೆ ನೀರು ಹಾಯಿಸುವ ವೇಳೆ ವಿದ್ಯುತ್ ಸ್ಪರ್ಶವಾಗಿ ರೈತನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೆರೆತೊಣ್ಣೂರು ಗ್ರಾಮದ ಲೇಟ್ ಕೃಷ್ಣೇಗೌಡ ಅವರ ಮಗ ಟಿ.ಕೆ.ಅನಂತ (42) ಮೃತಪಟ್ಟ ರೈತ. ಅನಂತ ಅವರು ಶಂಕನಹಳ್ಳಿ ಗ್ರಾಮದ ಬಳಿ ಇರುವ ತಮ್ಮ ಜಮೀನಿನಲ್ಲಿ ಪರಂಗಿ ಹಣ್ಣು ಬೆಳೆದಿದ್ದು, ಬುಧವಾರ ಮಧ್ಯಾಹ್ನ ತೋಟಕ್ಕೆ ನೀರು ಹಾಯಿಲು ಮೋಟರ್ ಸ್ವಿಚ್‌ ಆನ್ ಮಾಡುವ ವೇಳೆ ವಿದ್ಯುತ್ ಪ್ರವಹಿಸಿದಾಗ ಈ ಘಟನೆ ನಡೆದಿದೆ. ಅನಂತ ಅವರ ತೋಟದ ಅಕ್ಕಪಕ್ಕದಲ್ಲಿದ್ದ ರೈತರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದರಾದರೂ ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮೃತ ಅನಂತ ಅವರಿಗೆ ಪತ್ನಿ ಹಾಗೂ ಇಬ್ಬರು ಮ‌ಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT