ಸಾಂದರ್ಭಿಕ ಚಿತ್ರ
ಮಂಡ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್ಟಿ ಪರಿಷ್ಕೃತಗೊಳಿಸಿರುವುದರಿಂದ ಜನಸಾಮಾನ್ಯರು ಬಳಸುವ ದಿನನಿತ್ಯದ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗುವಂತಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿದ್ದರಾಮಯ್ಯ ಶ್ಲಾಘಿಸಿದರು.
ಎಂಟು ವರ್ಷಗಳಿಂದ ಜಿಎಸ್ಟಿಯಲ್ಲಿನ ನ್ಯೂನತೆ ಪರಿಶೀಲಿಸಿದ ಜಿಎಸ್ಟಿ ಪರಿಷತ್ತು, ಅವುಗಳನ್ನು ಸರಿಪಡಿಸಿ, ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರಗಳು ತೆರಿಗೆಯನ್ನು ಜಿಎಸ್ಟಿ ಜಾರಿಗೂ ಮೊದಲು ತನ್ನಿಷ್ಟಕ್ಕೆ ವಿಧಿಸುತ್ತಿದ್ದವು. 2017ರ ಜುಲೈ 1ರಿಂದ ಜಿಎಸ್ಟಿ ಜಾರಿ ಮಾಡಲಾದ ಹಿನ್ನೆಲೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮತ್ತು ರಾಜ್ಯಗಳ ನಡುವಿನ ಸರಕು ಸಾಗಣೆ ಸರಳೀಕೃತಗೊಳಿಸಲಾಯಿತು. ಇದರಿಂದ ಏಕ ರಾಷ್ಟ್ರ, ತೆರಿಗೆ, ವ್ಯಾಪಾರಕ್ಕೆ ನಾಂದಿ ಹಾಡಿತು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ, ಮುಖಂಡ ನಿತ್ಯಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.