ಹಲಗೂರು: ಎಚ್.ಬಸಾಪುರ ಗ್ರಾಮ ಪಂಚಾಯಿತಿ ನೂತನ ಅದ್ಯಕ್ಷರಾಗಿ ನಂದೀಪುರ ಗ್ರಾಮದ ಶ್ರೀಧರ್ ಅವಿರೋಧವಾಗಿ ಆಯ್ಕೆಯಾದರು.
ಬಸವನಹಳ್ಳಿ ಗ್ರಾಮದ ಶಶಿಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅದ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಶ್ರೀಧರ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿ ನಂಜುಂಡೇಗೌಡ ಅವಿರೋಧ ಅಯ್ಕೆ ಘೋಷಣೆ ಮಾಡಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರೇಣುಕಾ ಕುಮಾರಸ್ವಾಮಿ, ಸದಸ್ಯರಾದ ಬಿ.ಎಸ್. ಶಶಿಕುಮಾರ್, ಬಿ.ಡಿ.ರಾಜೇಂದ್ರ, ಶಿವರಾಜು, ಜ್ಯೋತಿ, ಮುತ್ತಮ್ಮ, ಮಂಜುನಾಥ್, ಶಿವರಾಜು, ಪಿ.ಡಿ.ಒ ಮಂಗಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.