ADVERTISEMENT

ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾ ಶ್ರೀಧರ್ ಅವಿರೋಧ ಅಯ್ಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:33 IST
Last Updated 29 ಮೇ 2023, 13:33 IST
ಹಲಗೂರು ಸಮೀಪದ ಎಚ್. ಬಸಾಪುರ ಗ್ರಾಮ ಪಂಚಾಯತಿ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಶ್ರೀಧರ್ ರವರನ್ನು ಸದಸ್ಯರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಶಶಿಕುಮಾರ್, ರಾಜೇಂದ್ರ, ಶಿವರಾಜು ಸೇರಿದಂತೆ ಹಲವರು ಇದ್ದರು.
ಹಲಗೂರು ಸಮೀಪದ ಎಚ್. ಬಸಾಪುರ ಗ್ರಾಮ ಪಂಚಾಯತಿ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಶ್ರೀಧರ್ ರವರನ್ನು ಸದಸ್ಯರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಶಶಿಕುಮಾರ್, ರಾಜೇಂದ್ರ, ಶಿವರಾಜು ಸೇರಿದಂತೆ ಹಲವರು ಇದ್ದರು.   

ಹಲಗೂರು: ಎಚ್.ಬಸಾಪುರ ಗ್ರಾಮ ಪಂಚಾಯಿತಿ ನೂತನ ಅದ್ಯಕ್ಷರಾಗಿ ನಂದೀಪುರ ಗ್ರಾಮದ ಶ್ರೀಧರ್ ಅವಿರೋಧವಾಗಿ ಆಯ್ಕೆಯಾದರು.

ಬಸವನಹಳ್ಳಿ ಗ್ರಾಮದ ಶಶಿಕುಮಾರ್  ಅವರ ರಾಜೀನಾಮೆಯಿಂದ ತೆರವಾಗಿದ್ದ ಅದ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಶ್ರೀಧರ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿ ನಂಜುಂಡೇಗೌಡ ಅವಿರೋಧ ಅಯ್ಕೆ ಘೋಷಣೆ ಮಾಡಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರೇಣುಕಾ ಕುಮಾರಸ್ವಾಮಿ, ಸದಸ್ಯರಾದ ಬಿ.ಎಸ್. ಶಶಿಕುಮಾರ್, ಬಿ.ಡಿ.ರಾಜೇಂದ್ರ, ಶಿವರಾಜು, ಜ್ಯೋತಿ, ಮುತ್ತಮ್ಮ, ಮಂಜುನಾಥ್, ಶಿವರಾಜು, ಪಿ.ಡಿ.ಒ ಮಂಗಳ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.