ಕೆ.ಆರ್.ಪೇಟೆ: ‘ನಾನು ತುಮಕೂರಿನಲ್ಲಿ ಸೋಲು ಕಂಡಿರಬಹುದು. ಆದರೆ, ಮನೆಯಲ್ಲಿ ಸುಮ್ಮನೆ ಮಲಗುವ ವ್ಯಕ್ತಿ ನಾನಲ್ಲ. ರೈತ ಇರುವವರೆಗೂ ಈ ನನ್ನ ಘಟ ಇರುತ್ತದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶುಕ್ರವಾರ ಹೇಳಿದರು.
‘1999ರಲ್ಲಿ ದೇವೇಗೌಡನ ಕತೆ ಮುಗಿಯಿತ. ಇನ್ನೇನಿದ್ದರೂ ಮನೆ ಕಡೆ ಹೋಗಬೇಕು ಎಂದು ನನ್ನ ಸಂಬಂಧಿಕರೇ ಮಾತನಾಡಿದ್ದರು. ಆದರೆ, ರೈತರ ಪರವಾದ ಹೋರಾಟ ನನ್ನಲ್ಲಿ ಕೆಚ್ಚು ತುಂಬಿದೆ. ಇನ್ನೂ ಶಕ್ತಿಯಿದ್ದು, ಹೋರಾಟ ಮುಂದುವರಿಸುತ್ತೇನೆ. ನಮ್ಮ ಅಭ್ಯರ್ಥಿಗೆ ಕೊಡುವ ಒಂದೊಂದು ಮತವೂ ದೇವೇಗೌಡನಿಗೆ ಕೊಡುವ ಮತವಾಗಿದೆ’ ಎಂದರು.
‘ಈ ಉಪ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕು. ಕಾವೇರಿ ನೀರು ಹಂಚಿಕೆ ಸೇರಿದಂತೆ ಅಭಿವೃದ್ಧಿ ವಿಚಾರ ಬಂದಾಗ ನಮ್ಮ ರಾಜ್ಯ ಅನ್ಯಾಯಕ್ಕೆ ಒಳಗಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.