ಮಂಡ್ಯ: ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ನಿರಂತರ ಮಳೆ ಸೋಮವಾರವೂ ಮುಂದುವರಿದಿದೆ. ನಗರದ ವಿವಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದು ಕಾರು ಸೇರಿ ಏಳೆಂಟು ಬೈಕ್ಗಳು ಜಖಂಗೊಂಡಿವೆ.
ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ, ಮದ್ದೂರು ಭಾಗದಲ್ಲಿ ಜೋರು ಮಳೆಯಾಗಿದೆ. ಮಳೆಯಿಂದ ಭೂಮಿ ತೇವವಾಗಿದ್ದು ಮರಗಳಿಗೆ ಅಪಾಯ ಪರಿಸ್ಥಿತಿ ಇದೆ. ವಿವಿ ರಸ್ತೆಯ ಅಂಚೆ ಕಚೇರಿ ಸಮೀಪ ಇದ್ದ ಬನ್ನಿ ಮರ ಹಳೆಯದಾಗಿದ್ದು ಸೋಮವಾರ ಮಧ್ಯಾಹ್ನ ಉರುಳಿ ಬಿತ್ತು.
ಮರವು ನಿಧಾನವಾಗಿ ಬಾಗುತ್ತಿರುವುದನ್ನು ಗಮನಿಸಿದ ಜನರು ಓಡಿ ಹೋದರು. ಆದ್ದರಿಂದ ಜನರಿಗೆ ಯಾವುದೇ ಅಪಾಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.