ಬೆಳಕವಾಡಿ: ಇಲ್ಲಿನ ತಿ.ನರಸೀಪುರ ರಸ್ತೆಯ ದೊಡ್ಡಮ್ಮ ದೇವಸ್ಥಾನದ ಬಳಿ ಜೆಸಿಬಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಮುಟ್ಟನಹಳ್ಳಿಯ ಲೇಟ್ ಗುರುಶಾಂತ ಅವರ ಪುತ್ರ, ಕಾರು ಚಾಲಕ ಅಚ್ಯುತ್ (26) ಶನಿವಾರ ಮೃತಪಟ್ಟರು.
ಬಿಜಿಪುರ ಕಡೆಯಿಂದ ಹೋಗುತ್ತಿದ್ದ ಜೆಸಿಬಿ ಮತ್ತು ಮುಟ್ಟನಹಳ್ಳಿ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿತು. ತ್ರೀವ್ರವಾಗಿ ಗಾಯಗೊಂಡಿದ್ದ ಕಾರು ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಚ್ಯುತ್ ಮೃತಪಟ್ಟರು.
ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.