ADVERTISEMENT

ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 13:43 IST
Last Updated 5 ಆಗಸ್ಟ್ 2020, 13:43 IST

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಬುಧವಾರ ಸಂಜೆಯ ವೇಳೆಗೆ ಒಳಹರಿವು 29,955 ಕ್ಯುಸೆಕ್‌ ದಾಖಲಾಗಿತ್ತು.

ಒಳಹರಿವು ಹೆಚ್ಚಾಗಿರುವ ಕಾರಣ 24 ಗಂಟೆಯ ಅವಧಿಯಲ್ಲಿ ಜಲಾಶಯಕ್ಕೆ 2.30 ಅಡಿ ನೀರು ಹರಿದು ಬಂದಿದೆ. ಆ.4ರಂದು ಸಂಜೆ 106.10 ಅಡಿ ಇದ್ದ ಜಲಾಶಯದ ನೀರಿನ ಮಟ್ಟದ ಬುಧವಾರ ಸಂಜೆಯ ವೇಳೆಗೆ 108.40 ಅಡಿಗೆ ತಲುಪಿದೆ. 4,715 ಕ್ಯುಸೆಕ್‌ ಹೊರಹರಿವು ಇದೆ. ಜಲಾಶಯದಲ್ಲಿ 30.144 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT