ADVERTISEMENT

ಲಾರಿ ಉರುಳಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 2:21 IST
Last Updated 21 ಸೆಪ್ಟೆಂಬರ್ 2020, 2:21 IST
ಚಾಲಕನ ನಿಯಂತ್ರಣ ತಪ್ಪಿ ಕಿಕ್ಕೇರಿ ಸಮೀಪದ ಗಾಂಧಿನಗರದ ರಸ್ತೆಯಲ್ಲಿ ಭಾನುವಾರ ಸಂಜೆ ಉರುಳಿ ಬಿದ್ದಿರುವುದು
ಚಾಲಕನ ನಿಯಂತ್ರಣ ತಪ್ಪಿ ಕಿಕ್ಕೇರಿ ಸಮೀಪದ ಗಾಂಧಿನಗರದ ರಸ್ತೆಯಲ್ಲಿ ಭಾನುವಾರ ಸಂಜೆ ಉರುಳಿ ಬಿದ್ದಿರುವುದು   

ಕಿಕ್ಕೇರಿ: ಸಮೀಪದ ಗಾಂಧಿನಗರದ ಬಳಿ ಭಾನುವಾರ ಸಂಜೆ ಲಾರಿ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿಗೆ ಗಾಯಗಳಾಗಿವೆ.

ಹೋಬಳಿಯ ಗಂಗೇನಹಳ್ಳಿ ಗ್ರಾಮದ ಪವನ್ (23) ಮೃತ ಚಾಲಕ.

ಕೆ.ಆರ್.ಪೇಟೆ ಕಡೆಯಿಂದ ಖಾಲಿ ಲಾರಿಯನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗುವಾಗ ಅವಘಡವಾಗಿದೆ. ಜತೆಯಲ್ಲಿದ್ದ ಸ್ನೇಹಿತ ಉಮೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಘಟನಾ ಸ್ಥಳಕ್ಕೆ ಕಿಕ್ಕೇರಿ ಠಾಣೆ ಪಿ‌ಎಸ್‌ಐ ನವೀನ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.