ADVERTISEMENT

ಕೋತಿಯ ತಿಥಿ ನೆರವೇರಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:09 IST
Last Updated 9 ಮೇ 2020, 9:09 IST
ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಗ್ರಾಮದಲ್ಲಿ ಕೋತಿಯು ಆಕಸ್ಮಿಕ ಮರಣಹೊಂದಿದ್ದ ಕೋತಿಯ ತಿಥಿ ಕಾರ್ಯವನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ನಾರಾಯಣಸ್ವಾಮಿ ನೇರವೇರಿಸಿದರು
ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಗ್ರಾಮದಲ್ಲಿ ಕೋತಿಯು ಆಕಸ್ಮಿಕ ಮರಣಹೊಂದಿದ್ದ ಕೋತಿಯ ತಿಥಿ ಕಾರ್ಯವನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ನಾರಾಯಣಸ್ವಾಮಿ ನೇರವೇರಿಸಿದರು   

ಸಂತೇಬಾಚಹಳ್ಳಿ:ಹೋಬಳಿಯ ಸಾರಂಗಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಬಳಿ 11 ದಿನದ ಹಿಂದೆ ಮೃತಪಟ್ಟ ಕೋತಿಗೆ ಗ್ರಾಮಸ್ಥರು ಉತ್ತರ ಕ್ರಿಯಾದಿ ನಡೆಸಿದರು.

ದೇವಸ್ಥಾನದ ಬಳಿ ಇದ್ದ ಕೋತಿ ಯನ್ನು ಗ್ರಾಮಸ್ಥರು ಹನುಮಂತನ ಪ್ರತಿರೂಪ ಎಂದು ಭಾವಿಸಿ ಹಿಂದೂ ಸಂಪ್ರದಾಯದಂತೆ ಪೂಜೆಯನ್ನು ಸಲ್ಲಿಸಿ ಮಣ್ಣುಮಾಡಿದ್ದರು. ಅಲ್ಲದೇ ಹನ್ನೊಂದನೇ ದಿನದ ಉತ್ತರ ಕ್ರೀಯಾದಿ ಭೂ ಶಾಂತಿ ಕಾರ್ಯವನ್ನು ಗ್ರಾಮಸ್ಥರುಗಳು ಸಾರಂಗಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ನಡೆಸಿದರು.

ಈಗ ತಿಥಿಯನ್ನು ಸರಳವಾಗಿ ಮಾಡಿದ್ದು ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಅದ್ಧೂರಿಯಾಗಿ ಮಾಡುತ್ತೇವೆ ಎಂದು ಗ್ರಾಮದ ಮುಖಂಡ ನಿಂಗರಾಜು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.