ADVERTISEMENT

ಕೆ.ಆರ್.ಪೇಟೆ: ಮಾಗಡಿ ಭಾಗಕ್ಕೆ ‘ಹೇಮಾವತಿ’ ನೀರು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 14:23 IST
Last Updated 14 ಜೂನ್ 2025, 14:23 IST
ಮದುಗೆರೆ ರಾಜೇಗೌಡ
ಮದುಗೆರೆ ರಾಜೇಗೌಡ   

ಕೆ.ಆರ್.ಪೇಟೆ: ‘ಹೇಮಾವತಿ ನೀರನ್ನು ತುಮಕೂರಿನಿಂದ ಮಾಗಡಿ ಭಾಗಕ್ಕೆ ತೆಗೆದುಕೊಂಡು ಹೋಗುವ ಸರ್ಕಾರದ ನಿರ್ಧಾರದ ಬಗ್ಗೆ ಈ ಭಾಗದ ಶಾಸಕರು ಧ್ವನಿ ಎತ್ತದಿರುವುದು ಸರಿಯಲ್ಲ’ ಎಂದು ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಮದುಗೆರೆ ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ಕಾರದ ಈ ವಿವಾದಿತ ಯೋಜನೆಯಿಂದ ಜಿಲ್ಲೆಯ ಹೇಮಾವತಿ ಜಲಾನಯನ ಪ್ರದೇಶದ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ಮತ್ತು ಮಂಡ್ಯ ತಾಲ್ಲೂಕಿನ ಕೆಲ ಪ್ರದೇಶಗಳ ರೈತರ ಬದುಕು ಬೀದಿಗೆ ಬೀಳಲಿದೆ. ಮೂಲ ಯೋಜನೆಯನ್ನು ಬದಲಿಸಿ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋದರೆ ಅದರ ದುಷ್ಪರಿಣಾಮ ಈ ನಾಲ್ಕು ತಾಲ್ಲೂಕಿನ ರೈತರ ಮೇಲೆ ಆಗಲಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     

‘ಹೇಮಾವತಿ ಜಲಾಶಯದಲ್ಲಿ 27 ಟಿಎಂಸಿ ನೀರು ಸಂಗ್ರಹವಿದ್ದರೂ ಬೇಸಿಗೆ ನೀರು ಪಡೆಯಲಾಗದ ಸ್ಥಿತಿಯಲ್ಲಿ ಮಂಡ್ಯ ಭಾಗದ ರೈತರು ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ಸರ್ಕಾರದ ತೀರ್ಮಾನದ ವಿರುದ್ದ ಧ್ವನಿ ಎತ್ತಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.