ADVERTISEMENT

ಜಿಲ್ಲೆಯ ವಿವಿಧೆಡೆ ಮಳೆ; ಕೆರೆಯಂತಾದ ರಸ್ತೆ ಗುಂಡಿ

ಕೆಲವೆಡೆ ಕಟ್ಟಿಕೊಂಡ ಚರಂಡಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 16:09 IST
Last Updated 24 ಆಗಸ್ಟ್ 2022, 16:09 IST
ಮಂಡ್ಯ ನಗರದಲ್ಲಿ ಸುರಿದ ಮಳೆಗೆ ವಿವಿ ರಸ್ತೆಯು ಜಲಾವೃತಗೊಂಡಿತ್ತು
ಮಂಡ್ಯ ನಗರದಲ್ಲಿ ಸುರಿದ ಮಳೆಗೆ ವಿವಿ ರಸ್ತೆಯು ಜಲಾವೃತಗೊಂಡಿತ್ತು   

ಮಂಡ್ಯ: ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗಿನಿಂದ ಮೋಡಕವಿದ ವಾತಾವರಣ ಸಂಜೆವರೆಗೂ ಮುಂದುವರಿದಿತ್ತು, ನಂತರ ಎಲ್ಲೆಡೆ ಗುಡುಗು ಸಹಿತ ಮಳೆ ಆರಂಭವಾಯಿತು.

ಸಂಜೆ ವೇಳೆಗೆ ಆರಂಭವಾದ ಮಳೆಗೆ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಅನಾನುಕೂಲ ಉಂಟಾಯಿತು. ಮಳೆಯಲ್ಲಿಯೇ ವಾಹನ ಸವಾರರು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಳೆಯಿಂದ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿ ಕೆರೆಯಂತಾಗಿತ್ತು.

ನಗರದ ವಿವಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದರಿಂದ ದ್ವಿಚಕ್ರ ವಾಹನ ಸವಾರರಿಗೆ ಕೆಲಕಾಲ ತೊಂದರೆ ಉಂಟಾಯಿತು. ಆರ್‌‍.ಪಿ.ರಸ್ತೆ ಸೇರಿದಂತೆ ಚರಂಡಿಗಳಲ್ಲಿ ನೀರು ಕಟ್ಟಿಕೊಂಡು ಅವಾಂತರವಾಯಿತು. ನಗರಸಭೆ, ಅಂಚೆಕಚೇರಿ ಸೇರಿದಂತೆ ಬಹುತೇಕ ಕಚೇರಿಗಳ ಆವರಣದಲ್ಲಿ ನೀರು ನಿಂತಿತ್ತು.

ADVERTISEMENT

ಮಳೆ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.