ADVERTISEMENT

ಪರಿಸರ ಪಾಠ ಮಾಡಿದ ಸಚಿವ ಸುರೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 16:01 IST
Last Updated 5 ಜೂನ್ 2020, 16:01 IST
ಕಂಚುಗಹಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಸಸಿ ನೆಟ್ಟು ನೀರೆರೆದರು
ಕಂಚುಗಹಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಸಸಿ ನೆಟ್ಟು ನೀರೆರೆದರು   

ಮಳವಳ್ಳಿ: ಪ್ರಾಥಮಿಕ ಹಾಗೂ ಪ್ರಾಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಶುಕ್ರವಾರ ಚಾಮರಾಜನರಕ್ಕೆ ಭೇಟಿ ನೀಡಿ ಪಾಪಸ್‌ ಬರುವ ಮಾರ್ಗಮಧ್ಯೆ ತಾಲ್ಲೂಕಿನ ಕಂಚುಗಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತ ಪಾಠ ಬೋಧನೆ ಮಾಡಿದರು.

ಕಂಚುಗಹಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ದೇವಸ್ಥಾನ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು. ಶಾಲಾ ಮಕ್ಕಳನ್ನು ಕರೆದು ‘ನಿಮ್ಮ ಊರು ನೋಡಲು ಬಹಳ ಸುಂದರವಾಗಿದೆ. ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡಬೇಕು. ಅವುಗಳನ್ನು ಪೋಷಣೆ ಮಾಡಿದಾಗ ಮುಂದಿನ ದಿನಗಳಲ್ಲಿ ಸಾಕಷ್ಟು ಮಳೆ ಬಂದು ವ್ಯವಸಾಯ ಮಾಡಲು ಅನುಕೂಲವಾಗುತ್ತದೆ. ನಿಮ್ಮ ಮನೆಯವರು ನೆಮ್ಮದಿಯಾಗಿ ಜೀವನ ನಡೆಸುತ್ತಾರೆ’ ಎಂದು ಹೇಳಿದರು.

‘ಶಾಲೆ ತೆರದಿಲ್ಲ, ಈಗ ಏನು ಮಾಡುತ್ತಿದ್ದೀರಿ’ ಎಂದು ಮಕ್ಕಳನ್ನು ಪ್ರಶ್ನಿಸಿದರು. ಅದಕ್ಕೆ ಮಕ್ಕಳು ‘ಸರ್ ಕೊರೊನಾ ಇದೆಯಲ್ಲ, ಏನ್ ಮಾಡುವುದಕ್ಕೂ ಭಯವಾಗುತ್ತಿದೆ’ ಎಂದರು. ಆಗ ಸಚಿವರು ‘ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಇರಬೇಕು. ಇನ್ನೂ ಸ್ವಲ್ಪ ದಿನ ಶಾಲೆಗಳು ಪ್ರಾರಂಭವಾಗುತ್ತವೆ. ಭಯಪಡಬೇಡಿ’ ಎಂದು ವಿಶ್ವಾಸ ಮೂಡಿಸಿದರು.

ADVERTISEMENT

ಮುಖಂಡರಾದ ಜಿ.ಮಹದೇವಪ್ಪ, ಶಿವಪ್ಪ, ಗ್ರಾ.ಪಂ.ಮಾಜಿ ಸದಸ್ಯ ನಾಗಪ್ಪ, ಪಿಎಸ್ಐ ಉಮಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.