ADVERTISEMENT

ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 13:16 IST
Last Updated 11 ಡಿಸೆಂಬರ್ 2023, 13:16 IST
ಹಸಿ ಅವರೆಕಾಳಿನಿಂದ ಬಸವೇಶ್ವರ ಸ್ವಾಮಿಯನ್ನು ಅಲಂಕರಿಸಲಾಗಿತ್ತು
ಹಸಿ ಅವರೆಕಾಳಿನಿಂದ ಬಸವೇಶ್ವರ ಸ್ವಾಮಿಯನ್ನು ಅಲಂಕರಿಸಲಾಗಿತ್ತು   

ಹಲಗೂರು: ಸಮೀಪದ ಬಸವನಹಳ್ಳಿ ಗ್ರಾಮದ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಕೊನೆಯ ದಿನದ ಪೂಜಾ ಕಾರ್ಯಕ್ರಮ ಭಕ್ತಿ ಭಾವದಿಂದ ನಡೆಯಿತು.

ಅರ್ಚಕ ಪ್ರಸಾದ್ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳ ನಡೆದವು. ಬಿಡಿಸಿದ ಹಸಿ ಅವರೆಕಾಳು, ಬಾದಾಮಿ, ಗೋಡಂಬಿ ಮತ್ತು ಚೆರ್ರಿ ಹಣ್ಣುಗಳಿಂದ ಮಾಡಿದ್ದ ಸ್ವಾಮಿಯ ಅಲಂಕಾರ ಕಣ್ಮನ ಸೆಳೆಯಿತು. ನಂತರ  ಅನ್ನ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಅಭಿಜಿತ್ ಬಸವರಾಜು, ರಾಕೇಶ್, ಎಚ್.ಎಂ.ಪ್ರಮೋದ್, ಶಿವಶಂಕರ್, ಶ್ರೀಕಾಂತ್, ಕಿಶೋರ್ ಜಾತಪ್ಪ ಸೇರಿದಂತೆ ವಿನಾಯಕ ಯುವಕ ಮಿತ್ರ ಮಂಡಳಿ ಸದಸ್ಯರು ಭಾಗವಹಿಸಿದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.