ADVERTISEMENT

ನಾಗಮಂಗಲ: ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಆಧ್ಯಾತ್ಮಿಕ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:14 IST
Last Updated 24 ಜೂನ್ 2025, 15:14 IST
ನಾಗಮಂಗಲ ಪಟ್ಟಣದ ಕುವೆಂಪು ಬಡಾವಣೆಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಮಾತೇಶ್ವರಿ ಜಗದಂಬ ಸರಸ್ವತಿ ಜೀ ಅವರ 60ನೇ ವರ್ಷದ ಪುಣ್ಯ ಸ್ಮೃತಿ ದಿನದ ಕಾರ್ಯಕ್ರಮದಲ್ಲಿ ಪುಷ್ಪ ನಮನವನ್ನು ಸಲ್ಲಿಸಲಾಯಿತು 
ನಾಗಮಂಗಲ ಪಟ್ಟಣದ ಕುವೆಂಪು ಬಡಾವಣೆಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಮಾತೇಶ್ವರಿ ಜಗದಂಬ ಸರಸ್ವತಿ ಜೀ ಅವರ 60ನೇ ವರ್ಷದ ಪುಣ್ಯ ಸ್ಮೃತಿ ದಿನದ ಕಾರ್ಯಕ್ರಮದಲ್ಲಿ ಪುಷ್ಪ ನಮನವನ್ನು ಸಲ್ಲಿಸಲಾಯಿತು    

ನಾಗಮಂಗಲ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸಂಸ್ಥೆಯ ಪ್ರಥಮ ಆಡಳಿತ ಅಧಿಕಾರಿಣಿ ಮಾತೇಶ್ವರಿ ಜಗದಂಬ ಸರಸ್ವತೀಜೀ ಅವರ 60ನೇ ಪುಣ್ಯಸ್ಮೃತಿ ದಿನವನ್ನು ಆಧ್ಯಾತ್ಮಿಕ ದಿನವನ್ನಾಗಿ ಆಚರಿಸಲಾಯಿತು.

ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಚಾಮರಾಜನಗರ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬ್ರಹ್ಮಾಕುಮಾರಿ ದಾನೇಶ್ವರೀ ಅವರು ‘ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಮಹತ್ತರವಾದ ಸ್ಥಾನವನ್ನು ಪಡೆದಿದ್ದಾರೆ. ಅವರಲ್ಲಿ ಮಾತೇಶ್ವರೀ ಜಗದಂಬ ಸರಸ್ವತೀ ಜೀ ಅವರು ಅಗ್ರಗಣ್ಯರು’ ಎಂದರು.

ಬ್ರಹ್ಮಾಕುಮಾರಿ ಶೈಲಾಜಿ, ಸರಸ್ವತಿ‌ಜೀ ಅವರ ಸಾಧನೆಗಳ ಕುರಿತು ಮಾಹಿತಿ ನೀಡಿದರು.

ADVERTISEMENT

ಬಿ.ಕೆ.ಆರಾಧ್ಯ, ಕೃಷ್ಣಮೂರ್ತಿ, ದೀಪು, ಲಲಿತಕ್ಕ, ಕೆಂಪಮ್ಮ,ಪಾರ್ವತಿ ಅಕ್ಕ, ನಾಗರಾಜ್, ಶಿವಕಮಲ, ವಿಜಯಕುಮಾರ್, ಶ್ರೀನಿವಾಸ್, ಸುಶೀಲಕ್ಕ, ಜಯಲಕ್ಷ್ಮೀ ಅಕ್ಕ, ಪೂರ್ಣಿಮಕ್ಕ, ರೇವಣ್ಣ, ಸಿದ್ದೇಶ ಇದ್ದರು.

ನಾಗಮಂಗಲ ಪಟ್ಟಣದ ಕುವೆಂಪು ಬಡಾವಣೆಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಮಾತೇಶ್ವರಿ ಜಗದಂಬ ಸರಸ್ವತಿ ಜೀ ಅವರ 60 ನೇ ವರ್ಷದ ಪುಣ್ಯ ಸ್ಮೃತಿ ದಿನದ ಕಾರ್ಯಕ್ರಮದಲ್ಲಿ ಪುಷ್ಪ ನಮನವನ್ನು ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.