ADVERTISEMENT

ಶ್ರೀರಂಗ‍ಪಟ್ಟಣ | ಚಿರತೆ ದಾಳಿ: ಮೂರು ಮೇಕೆ, ಒಂದು ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 13:53 IST
Last Updated 20 ಜೂನ್ 2025, 13:53 IST
ಚಿರತೆ (ಸಾಂದರ್ಭಿಕ ಚಿತ್ರ)
ಚಿರತೆ (ಸಾಂದರ್ಭಿಕ ಚಿತ್ರ)   

ಶ್ರೀರಂಗ‍ಪಟ್ಟಣ: ತಾಲ್ಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಕೊಟ್ಟಿಗೆಯಲ್ಲಿ ದಾಳಿ ಮಾಡಿರುವ ಚಿರತೆ ಮೂರು ಮೇಕೆ, ಒಂದು ಕುರಿಯನ್ನು ಕೊಂದು ಮತ್ತೊಂದು ಮೇಕೆಯನ್ನು ಹೊತ್ತೊಯ್ದಿದೆ.

ಗ್ರಾಮದ ಮಹದೇವು ಅವರ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿ ಮೇಕೆ ಮತ್ತು ಕುರಿಯ ರಕ್ತ ಹೀರಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮೇಕೆ ಮತ್ತು ಕುರಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಚಿರತೆ ಸೆರೆಗೆ ಬೋನು ಇರಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT