ADVERTISEMENT

ಕೆ.ಆರ್.ಪೇಟೆ ತಾಲ್ಲೂಕಿಗೆ ಶೇ 60.88 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:39 IST
Last Updated 3 ಮೇ 2025, 14:39 IST

ಕೆ.ಆರ್.ಪೇಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 60.88ರಷ್ಟು ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಿಂದ ಒಟ್ಟು 2,544 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,549 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪಟ್ಟಣದ ಎಸ್.ಎಸ್.ಕೆ.ಸಿ ಪ್ರೌಢಶಾಲೆಯ ಜೆ. ಧೃತಿ 625 ಅಂಕಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಎಸ್. ಗೀತಾಂಜಲಿ 623, ಆರ್. ಎಸ್ ಸ್ವಪ್ನ 620 ಅಂಕ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ’ ಎಂದರು.

‘ಆದಿಚುಂಚನಗಿರಿ ಪ್ರೌಢಶಾಲೆಯ ಬಿ. ಧನುಷ್‌ ಗೌಡ ಶೇ 99, ಡಿ.ಆರ್. ಕೃಪ 99, ಆರ್ಯನ್ ಸತೀಶ್ ನಾಯಕ್ 98.88, ಚೈತನ್ಯ ಶಾಲೆಯ ಎಸ್ ಗೀತಾ 97.92, ತೇಗನಹಳ್ಳಿ ಆಶೀರ್ವಾದ ಶಾಲೆಯ ಬಿ.ಎನ್. ಅಮೂಲ್ಯ ಶೇ 97.76, ಆದಿಚುಂಚನಗಿರಿ ಶಾಲೆಯ ಆರ್. ಸ್ಫೂರ್ತಿ ಶೇ 97.44, ಕೇಂಬ್ರಿಡ್ಜ್ ಶಾಲೆಯ ಎಚ್.ಡಿ .ಮೌಲ್ಯ ಶೇ 97.92, ಹಂಸವೇಣಿ ಶೇ 97.44ರಷ್ಟು ಅಂಕ ಪಡೆದಿದ್ದಾರೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.