ADVERTISEMENT

ಮಂಡ್ಯ: ಕಬ್ಬು ಕಟಾವು ಮಾಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 13:42 IST
Last Updated 17 ಆಗಸ್ಟ್ 2024, 13:42 IST
ಕಬ್ಬು ಕಟಾವು ಮಾಡುವಂತೆ ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘ, ಕೆ.ಆರ್‌.ಎಸ್‌. ಪಕ್ಷದ ಕಾರ್ಯಕರ್ತರು ಹಾಗೂ ಮೈಷುಗರ್‌ ವ್ಯಾಪ್ತಿಯ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಿದರು
ಕಬ್ಬು ಕಟಾವು ಮಾಡುವಂತೆ ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘ, ಕೆ.ಆರ್‌.ಎಸ್‌. ಪಕ್ಷದ ಕಾರ್ಯಕರ್ತರು ಹಾಗೂ ಮೈಷುಗರ್‌ ವ್ಯಾಪ್ತಿಯ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಮೈಷುಗರ್‌ ಕಾರ್ಖಾನೆ ವತಿಯಿಂದ ಕಬ್ಬು ಕಟಾವು ಮಾಡಿಸದೆ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಕಬ್ಬು ಕಟಾವು ಮಾಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್‌ ಸಂಘ, ಕೆ.ಆರ್‌.ಎಸ್‌. ಪಕ್ಷದ ಕಾರ್ಯಕರ್ತರು ಹಾಗೂ ಮೈಷುಗರ್‌ ವ್ಯಾಪ್ತಿಯ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕುಮಾರ ಅವರಿಗೆ ಶನಿವಾರ ಮನವಿ ಪತ್ರ ನೀಡಿದರು.

ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಣೆ ಮಾಡಲಾಗಿದೆ. ಆದರೆ ಸರಿಯಾಗಿ ಬರ ಪರಿಹಾರವನ್ನು ನೀಡಿಲ್ಲ. ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಜೂನ್‌ ತಿಂಗಳಿನಲ್ಲಿ ಆರಂಭಿಸುವುದಾಗಿ ಹೇಳಿ, ಎರಡು ತಿಂಗಳು ತಡವಾಗಿ ಪ್ರಾರಂಭ ಮಾಡಿದ್ದಾರೆ, ಇದರಲ್ಲಿ ಪೂರ್ವ ತಯಾರಿ ಇಲ್ಲದೆ ಕೂಲಿಕಾರ್ಮಿಕರನ್ನು ಕರೆಯಿಸಿಕೊಳ್ಳದ ಕಾರಣ 15 ತಿಂಗಳ ಕಬ್ಬು ಗದ್ದೆಯಲ್ಲಿ ಒಣಗುತ್ತಿದೆ ಎಂದು ಆರೋಪಿಸಿದರು.

ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ಬಿ.ಪಿ. ಅಪ್ಪಾಜಿ ಮಾತನಾಡಿ, ಬೇಗ ಕಬ್ಬು ಕಟಾವು ಮಾಡಿದರೆ ಹೈನು ಭತ್ತ ಬೆಳೆಯಬಹುದು , ಇಲ್ಲದಿದ್ದರೆ ರೈತರು ವಂಚಿತರಾಗುತ್ತಾರೆ. ಕಬ್ಬನ್ನು ಎಲ್ಲಿಯಾದರೂ ಮಾರಲು ಅವಕಾಶ ನೀಡಬೇಕು. ಜೊತೆಗೆ ಸೂಕ್ತ ಬರ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಮುಖಂಡರಾದ ಜಯರಾಮ್‌, ಶಿವಣ್ಣ, ಜೋಗೀಗೌಡ, ಬಿ.ರುದ್ರಪ್ಪ, ಕೆ.ಶಿವಣ್ಣ, ಕೆ.ಜೆ.ಮಹೇಶ್‌ ಕೂಳಗೆರೆ, ಬೂದನೂರು ಮಲ್ಲೇಶ್, ಹೆಬ್ಬಕವಾಡಿ ಮಹೇಶ್, ಮಹಾದೇವ್, ಬೋರೇಗೌಡ, ಶಿವಣ್ಣ, ನಾಗರಾಜು ಹೊಳಲು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.