ತಿ.ನರಸೀಪುರ: ಗಂಡು ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಅತ್ತೆಯೇ ಸೊಸೆಗೆ ಬೆಂಕಿ ಹಚ್ಚಿ ಕೊಲೆ ಮಾಡಿ ರುವುದು ಮೂಗೂರು ಹೋಬಳಿ ಹೊಸಳ್ಳಿಯಲ್ಲಿ ನಡೆದಿದೆ.
ಕಾಂತರಾಜು ಎಂಬುವರ ಪತ್ನಿ ಪೂಜಾ (25) ಕೊಲೆಯಾದ ಮಹಿಳೆ. ಆಕೆಯ ಪೋಷಕರು ನೀಡಿದ ದೂರು ಆಧರಿಸಿ ಅತ್ತೆ ಚಾಮಮ್ಮ (53) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ವರುಣಾ ಹೋಬಳಿಯ ಹಡಜನ ಗ್ರಾಮದ ಪೂಜಾ ಹಾಗೂ ಕಾಂತರಾಜು ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಈಚೆಗೆ ಜನಿಸಿದ ಮೂರನೇ ಮಗು ಕೂಡ ಹೆಣ್ಣಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.