ADVERTISEMENT

ಮಜಾ ನೀಡಿದ ರೈತ ಕ್ರೀಡಾಕೂಟ

ತಾಲ್ಲೂಕು ಮಟ್ಟದ ಗ್ರಾಮೀಣ ದಸರಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 5:52 IST
Last Updated 21 ಸೆಪ್ಟೆಂಬರ್ 2013, 5:52 IST

ನಂಜನಗೂಡು: ತಾಲ್ಲೂಕು ಮಟ್ಟದ ಗ್ರಾಮೀಣ ದಸರಾ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ನಡೆದ ರೈತ ಪುರುಷರ ಮತ್ತು ಮಹಿಳೆಯರ ಕ್ರೀಡಾಕೂಟ ನೋಡುಗರಿಗೆ ಮನರಂಜನೆ ನೀಡಿತು.

ಕೆಸರುಗದ್ದೆ ಓಟದಲ್ಲಿ ಭಾಗವಹಿಸಿದ್ದ 21 ಪುರುಷರು ಎದ್ದು, ಬಿದ್ದು ಓಡುತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು. ಪುರುಷ ವಿಭಾಗದಲ್ಲಿ 3 ಮತ್ತು ಮಹಿಳಾ ವಿಭಾಗದಲ್ಲಿ 2 ಸ್ಪರ್ಧೆಗಳನ್ನು  ಏರ್ಪಡಿಸಲಾಗಿತ್ತು.

ಸ್ಪರ್ಧಾ ವಿಜೇತರ ವಿವರ ಹೀಗಿದೆ.
ಪುರುಷ ವಿಭಾಗ:  ಕೆಸರು ಗದೆ್ದ ಓಟ–  ಗೋಳೂರು ರವಿ (ಪ್ರಥಮ), ಹುಳಿಮಾವು ಯೋಗೇಶ್ (ದ್ವಿತೀಯ), ಹುಳಿಮಾವು ಶಿವಕುಮಾರ್‌ (ತೃತೀಯ).

ಗುಂಡು ಎತ್ತುವ ಸ್ಪರ್ಧೆ– ಬಸವಟಿ್ಟಗೆ ನಂಜುಂಡ (ಪ್ರಥಮ), ಗೋಣಹಳ್ಳಿ ಜಯಣ್ಣ (ದ್ವಿತೀಯ), ಗೋಣಹಳ್ಳಿ ಸಾ್ವಮಿ (ತೃತೀಯ).
ಗೊಬ್ಬರದ ಮೂಟೆ ಹೊತು್ತ  ಓಡುವ ಸ್ಪರ್ಧೆ–  ಕಪ್ಪಸೋಗೆ  ಮಹದೇವಸಾ್ವಮಿ (ಪ್ರಥಮ),  ಗೋಣಹಳ್ಳಿ ಸಾ್ವಮಿ (ದ್ವಿತೀಯ). ಗೋಣಹಳ್ಳಿ ಜಯಣ್ಣ (ತೃತೀಯ).

ಮಹಿಳಾ ವಿಭಾಗ: ರಂಗೋಲಿ ಸ್ಪರ್ಧೆ: ದೇವಿರಮ್ಮನಹಳ್ಳಿ ಶಶಿರೇಖಾ (ಪ್ರಥಮ), ಕಳಲೆ ಗೀತಾ (ದ್ವಿತೀಯ), ಹುಲ್ಲಹಳ್ಳಿ ಶಿವನಾಗಮ್ಮ (ತೃತೀಯ).

ನೀರು ತುಂಬಿದ ಬಿಂದಿಗೆ ಹೊತು್ತ ಓಡುವ ಸ್ಪರ್ಧೆ: ಹುಲ್ಲಹಳ್ಳಿ ಶಿವನಾಗಮ್ಮ (ಪ್ರಥಮ). ಹಂಡುವಿನಹಳ್ಳಿ ಶಶಿಕಲಾ (ದ್ವಿತೀಯ), ಸಿಂದೆಕೊಪ್ಪ ಪುಷ್ಪಾ (ತೃತೀಯ).

ಈ ಎಲ್ಲ ವಿಜೇತರು ಮೈಸೂರಿನಲ್ಲಿ  ನಡೆಯುವ ಜಿಲಾ್ಲ ಮಟ್ಟದ ಗಾ್ರಮೀಣ ದಸರಾ ಕ್ರೀಡಾಕೂಟದಲಿ್ಲ ಭಾಗವಹಿಸಲು ಆಯೆ್ಕಯಾಗಿದಾ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.