ADVERTISEMENT

ಸಾಮರ್ಥ್ಯ ಸೌಧ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:55 IST
Last Updated 14 ಅಕ್ಟೋಬರ್ 2011, 5:55 IST

ಕೆ.ಆರ್.ನಗರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗ್ರಾಮ ಸ್ವರಾಜ್ ಯೋಜನೆಯಡಿ ನಿರ್ಮಿಸಿ ರುವ `ಸಾಮರ್ಥ್ಯ ಸೌಧ~ವನ್ನು ಮಹಿಳೆ ಯರಿಗೆ ವಿವಿಧ ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತದೆ~ ಎಂದು ಶಾಸಕ ಸಾ.ರಾ.ಮಹೇಶ್ ಗುರುವಾರ ಹೇಳಿದರು.

ರೂ.28 ಲಕ್ಷ ಮೊತ್ತದಲ್ಲಿ ನಿರ್ಮಿಸಿರುವ `ಸಾಮರ್ಥ್ಯ ಸೌಧ~ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯು ತ್ತಿದ್ದಾರೆ ಎಂದು ಅಧ್ಯಕ್ಷೆ ಎಂ.ಜೆ. ಹೇಮಾವತಿ ಅಶೋಕ್ ಆರೋಪಿಸಿ ದ್ದರು. ಅದಕ್ಕೆ ಪ್ರತಿಕ್ರಿಯಿಸಿ ಮೈಸೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗಿಂತ ಕೆ.ಆರ್.ನಗರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಂ.ಜೆ.ಹೇಮಾವತಿ, ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗಣ್ಣ,  ಜಿ.ಪಂ.ಸದಸ್ಯ ರಾಜಯ್ಯ, ತಾ.ಪಂ. ಮಾಜಿ ಸದಸ್ಯ ಗೋವಿಂದೇಗೌಡ ಮಾತನಾಡಿದರು.

ಜಿ.ಪಂ.ಸದಸ್ಯರಾದ ನಳಿನಾಕ್ಷಿ ವೆಂಕಟೇಶ್, ಕಲ್ಪನಾ ಧನಂಜಯ್, ಸಿ.ಜೆ.ದ್ವಾರಕೀಶ್, ಸುಮಿತ್ರ ಗೋವಿಂದರಾಜು, ತಾ.ಪಂ.ಸದಸ್ಯರಾದ ತಂದ್ರೆ ಟಿ.ಎಸ್.ರವಿ, ಕವಿತ ರವಿಕುಮಾರ್, ಲಕ್ಷ್ಮಿ ಕನಕರಾಜು, ಸುಷ್ಮಾ ಹಲಗೇಗೌಡ, ಕೃಷ್ಣೇಗೌಡ, ರಾಮಪ್ಪ, ಎಂಜಿನಿಯರ್ ದುರಗಪ್ಪ, ಟಿ.ಎನ್.ಕೋದಂಡರಾಮು, ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಸವರಾಜು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.