ADVERTISEMENT

ಅಬ್ಬಳತಿ: ವೃದ್ಧ ದಂಪತಿ ಕಟ್ಟಿಹಾಕಿ ದರೋಡೆ

ನಾಲ್ವರು ದರೋಡೆಕೋರರಿಂದ ಕೃತ್ಯ; ಎಸ್‌ಪಿ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 5:04 IST
Last Updated 23 ಜುಲೈ 2021, 5:04 IST
ಪಿರಿಯಾಪಟ್ಟಣ ತಾಲ್ಲೂಕಿನ ಅಬ್ಬಳತಿ ಗ್ರಾಮದಲ್ಲಿ ದರೋಡೆ ನಡೆದಿದ್ದ ಮನೆಗೆ ಎಸ್‌ಪಿ ಚೇತನ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಪಿರಿಯಾಪಟ್ಟಣ ತಾಲ್ಲೂಕಿನ ಅಬ್ಬಳತಿ ಗ್ರಾಮದಲ್ಲಿ ದರೋಡೆ ನಡೆದಿದ್ದ ಮನೆಗೆ ಎಸ್‌ಪಿ ಚೇತನ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು   

ಪಿರಿಯಾಪಟ್ಟಣ: ತಾಲ್ಲೂಕಿನ ಅಬ್ಬಳತಿ ಗ್ರಾಮದ ಮನೆಯೊಂದಕ್ಕೆ ನುಗ್ಗಿರುವ ನಾಲ್ವರು ದರೋಡೆಕೋರರು ವೃದ್ಧ ದಂಪತಿಯನ್ನು ಕಟ್ಟಿಹಾಕಿ ಹಣ, ಒಡವೆ, ಮೊಬೈಲ್‌ ದೋಚಿದ್ದಾರೆ.

ಗ್ರಾಮದ ಗೋಪಿ ಮೋಹನ್‌ ಮತ್ತು ಮಣಿ ದಂಪತಿ ದರೋಡೆಗೆ ಒಳಗಾದವು. ಬುಧವಾರ ರಾತ್ರಿ 9.30 ಸುಮಾರಿಗೆ ಮನೆ ಹಿಂಬಾಗಿಲಲ್ಲಿ ಕಟ್ಟಿದ್ದ ನಾಯಿ ಬೊಗಳಿದ್ದನ್ನು ಗಮನಿಸಿದ ಗೋಪಿ ಮೋಹನ್‌ ಹೊರಬಂದಿದ್ದಾರೆ. ಆಗ ಹಿಂಬಾಗಿಲ ಮೂಲಕ ಪ್ರವೇಶಿಸಿದ ದರೋಡೆಕೋರರು ದಂಪತಿಯನ್ನು ಕಟ್ಟಿಹಾಕಿದ್ದಾರೆ. ನಂತರ 41 ಗ್ರಾಂ ತೂಕದ ಚಿನ್ನದ ಒಡವೆಗಳು, ₹4,000 ನಗದು, 3 ಮೊಬೈಲ್‌ಗಳು ಮತ್ತು ನಾಲ್ಕು ವಾಚುಗಳನ್ನು ದೋಚಿದ್ದಾರೆ.

ಪಕ್ಕದ ಮನೆಯ ವಿನೀತ್‌ ದಂಪತಿಯ ಕಿರುಚಾಟ ಕೇಳಿದ ಸ್ಥಳಕ್ಕೆ ಬಂದು, ಅವರನ್ನು ಹಗ್ಗದಿಂದ ಬಿಡಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಎಸ್‌ಪಿ ಚೇತನ್, ಹೆಚ್ಚುವರಿ ಎಸ್‌ಪಿ ಶಿವಕುಮಾರ್, ಪ್ರಭಾರ ಡಿವೈಎಸ್‌ಪಿ ಯೋಗಾನಂದ, ಇನ್‌ಸ್ಪೆಕ್ಟರ್ ಜಗದೀಶ್, ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಪಿರಿಯಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.