ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಮಿಳುನಾಡಿನಲ್ಲಿ ವಶಕ್ಕೆ ಪಡೆಯಲಾದ ಐವರು ಆರೋಪಿಗಳು ವೃತ್ತಿಪರ ಕಳ್ಳರ ಎಂಬ ಪ್ರಶ್ನೆ ಮೂಡಿದೆ.
ಘಟನೆ ನಡೆದ ಮರುದಿನ ಕೇರಳಕ್ಕೆ ತೆರಳಿದ್ದ ಬಿ.ಇ ವಿದ್ಯಾರ್ಥಿಗಳ ಹುಡುಕಾಟಕ್ಕೆ ಪೊಲೀಸರ ತಂಡವು ಕೇರಳಕ್ಕೆ ತೆರಳಿತ್ತು. ಸ್ಥಳದಲ್ಲಿ ದೊರೆತ ದುಬಾರಿ ಬೆಲೆಯ ಮದ್ಯದ ಬಾಟಲಿಯನ್ನು ಬೆಂಗಳೂರಿನ ಯಲಹಂಕದಲ್ಲಿ ಖರೀದಿಸಲಾಗಿತ್ತು ಎಂಬ ಮಾಹಿತಿ ಮೇರೆಗೆ ಯಲಹಂಕದ ಮದ್ಯದಂಗಡಿಯೊಂದರ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ಆದರೆ ಈಗ ಸ್ಥಳದಲ್ಲಿ ದೊರೆತ ತಾಳವಾಡಿ ಬಸ್ ಟಿಕೆಟ್ ಆಧಾರದ ಮೇಲೆ ತಮಿಳುನಾಡಿನಿಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇವರು ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.