ADVERTISEMENT

ಲಂಚ ಪಡೆಯುತ್ತಿದ್ದ ಬಿಇಒ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 19:05 IST
Last Updated 28 ಮಾರ್ಚ್ 2024, 19:05 IST
ಎ.ಟಿ.ಶಿವಲಿಂಗಯ್ಯ
ಎ.ಟಿ.ಶಿವಲಿಂಗಯ್ಯ   

ಪ್ರಜಾವಾಣಿ ವಾರ್ತೆ

ಮೈಸೂರು: ಅಂಗವಿಕಲ ಶಿಕ್ಷಕ ನರಸಿಂಹಮೂರ್ತಿ ಅವರ ಮೂರು ತಿಂಗಳ ಗೌರವ ಧನ ಬಿಡುಗಡೆಗೆ ವಿಶೇಷ ಶಿಕ್ಷಕ ರಮೇಶ ಅವರ ಮೂಲಕ ₹ 5 ಸಾವಿರ ಲಂಚ ಪಡೆಯುತ್ತಿದ್ದ ನಂಜನಗೂಡು ಬಿಇಒ ಎ.ಟಿ.ಶಿವಲಿಂಗಯ್ಯ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಬಿಇಒ ಶಿವಲಿಂಗಯ್ಯ ₹ 10 ಸಾವಿರಕ್ಕೆ ಬೇಡಿಕೆ ಇರಿಸಿರುವುದಾಗಿ ನರಸಿಂಹಮೂರ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆ ಪ್ರಕಾರ ಕಾರ್ಯಾಚರಣೆ ನಡೆಸಿದಾಗ ಶಿವಲಿಂಗಯ್ಯ, ರಮೇಶ ಅವರು ಸಿಕ್ಕಿಬಿದ್ದರು’ ಎಂದು ಲೋಕಾಯುಕ್ತ ಎಸ್‌ಪಿ ವಿ.ಜೆ.ಸಜಿತ್ ಹೇಳಿದರು.

ADVERTISEMENT
ರಮೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.