ಮೈಸೂರು: ಚೆಕ್ಬೌನ್ಸ್ನ ಮೂರು ಪ್ರಕರಣಗಳಲ್ಲಿ ಇಲ್ಲಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹಾಗೂ ಪ್ರದೀಪ್ಕುಮಾರ್ ಎಂಬುವವರಿಗೆ 4ನೇ ಜೆಎಂಎಫ್ಸಿ ನ್ಯಾಯಾಲಯವು ₹ 4.33 ಕೋಟಿ ದಂಡ ವಿಧಿಸಿದೆ. ಇದರೊಂದಿಗೆ ಪರಿಹಾರವಾಗಿ ₹ 4.34 ಕೋಟಿ ನೀಡಬೇಕು ಎಂದು ಆದೇಶಿಸಿದೆ.
ಇಲವಾಲದ ಮಾದಗಳ್ಳಿ ಗ್ರಾಮದ ಬಿ.ಭೈರಪ್ಪ ಅವರ ನಾಲ್ಕು ಎಕರೆ ಭೂಮಿಯನ್ನು ಖರೀದಿಸುವಾಗ ನಾರಾಯಣಗೌಡ ಹಾಗೂ ಪ್ರದೀಪ್ಕುಮಾರ್ ಮನೆ ನಿರ್ಮಿಸಿಕೊಡುವುದಾಗಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಇದಕ್ಕಾಗಿ ಅವರು ಭದ್ರತೆಯಾಗಿ ₹ 1.97 ಕೋಟಿ ಮೊತ್ತದ ಎರಡು ಚೆಕ್ಗಳು ಹಾಗೂ ₹ 1.69 ಲಕ್ಷ ಮೊತ್ತದ ಒಂದು ಚೆಕ್ ಕೊಟ್ಟಿದ್ದರು. ಆದರೆ, ಮನೆ ನಿರ್ಮಿಸಿಕೊಟ್ಟಿರಲಿಲ್ಲ. ಚೆಕ್ ಸಹ ಬೌನ್ಸ್ ಆಗಿತ್ತು.
ಇವರ ವಿರುದ್ಧ ಭೈರಪ್ಪ ಅವರು ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದನ್ಯಾಯಾಧೀಶ ರಾಜೀವ ಗೋಳಸಾರ, ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.