ADVERTISEMENT

ಮೈಸೂರು: ಹಂಪಾಪುರ ಕೇತಳ್ಳಿಯಲ್ಲಿ ಬೋನಿಗೆ ಬಿತ್ತು ಚಿರತೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 9:34 IST
Last Updated 12 ಏಪ್ರಿಲ್ 2020, 9:34 IST

ಮೈಸೂರು ಜಿಲ್ಲೆಯ ಹಂಪಾಪುರ ಸಮೀಪದ ಕೇತಳ್ಳಿ ಗ್ರಾಮದ ಮೀನಾಕ್ಷಿ ಎಂಬುವವರ ತೋಟದಲ್ಲಿ 5 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಬೋನಿಟ್ಟು ನಾಲ್ಕೈದು ದಿನ ಆಗಿದ್ದು ಇಂದು (ಭಾನುವಾರ) ಬೆಳಗಿನ ಜಾವ ನಾಲ್ಕು ಗಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದ ಕೂಡಲೇ ಅರಣ್ಯಾಧಿಕಾರಿ ಮಧು, ಡಿಆರ್‌ಎಫ್ ಸುನೀತಾ ಲಾಲಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.