ಮೈಸೂರು: ನಂಜನಗೂಡಿನಲ್ಲಿ ಈಚೆಗೆ ನಡೆದ ಬಾಲಕಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಬಾಲಕಿಯ ಸಮೀಪದ ಸಂಬಂಧಿಗಳೇ ಕೊಲೆ ಮಾಡಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಲೆಗೆ ತಮ್ಮ ಸೋದರ, ಸೋದರಿಯರನ್ನು ಬಿಟ್ಟು ಬಾಲಕಿ ವಾಪಸ್ ಬರುವಾಗ ಸಂಬಂಧಿಗಳ ನಡುವೆ ನಡೆಯುತ್ತಿದ್ದ ರಾಸಲೀಲೆಯನ್ನು ನೋಡಿದ್ದಾಳೆ. ಆಗ ಅವರು ರಾಸಲೀಲೆ ಬಯಲಿಗೆ ಬರುತ್ತದೆ ಎಂದು ಹೆದರಿ ಬಾಲಕಿಯನ್ನು ಬೆದರಿಸಲು ಮನೆಗೆ ನುಗ್ಗಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಬಾಲಕಿಯನ್ನು ಕೊಲೆ ಮಾಡಿದ್ದಾರೆ. ನಂತರ, ಅತ್ಯಾಚಾರ ಎಸಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನುವಂತೆ ಬಿಂಬಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.